ಜೀವಸಾರ್ಥಕತೆ ಯೋಜನೆಯ ಸಂಯೋಜಕ ಡಾ.ಕಿಶೋರ್ ಫಡ್ಕೆ ಮಾತನಾಡಿ, ‘ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳು ಹಲವರಿಗೆ ವರದಾನವಾಗಲಿವೆ. ಮೂತ್ರಪಿಂಡಗಳು, ಹೃದಯ ಸೇರಿದಂತೆ ವಿವಿಧ ಅಂಗಾಂಗಗಳನ್ನು ದಾನ ಮೂಡುವ ಮೂಲಕ ಒಬ್ಬ ವ್ಯಕ್ತಿ ಎಂಟಕ್ಕೂ ಅಧಿಕ ಮಂದಿಗೆ ನೆರವಾಗುವ ಅವಕಾಶವಿದೆ. ಜಾಗೃತಿ ಕೊರತೆಯಿಂದ ಕೆಲವರು ಅಂಗಾಂಗ ದಾನಕ್ಕೆ
ಹಿಂದೇಟು ಹಾಕುತ್ತಿದ್ದಾರೆ. ಮೃತ ವ್ಯಕ್ತಿಯ ಚರ್ಮ,ಎಲುಬುಗಳನ್ನೂ ದಾನವಾಗಿ ಪಡೆದು, ಅಗತ್ಯ ಇರುವವರಿಗೆ ಒದಗಿಸಲು ಅವಕಾಶವಿದೆ’ ಎಂದು ತಿಳಿಸಿದರು.