ಆಗಿದ್ದೇನು?: ಚನ್ನಪಟ್ಟಣ ಡಿಪೊಕ್ಕೆ ಸೇರಿದ್ದ ಬಸ್ ಡಿ. 11ರಂದು ಕಲಾಸಿಪಾಳ್ಯ ನಿಲ್ದಾಣದತ್ತ ಹೋಗುತ್ತಿತ್ತು. ಬೆಳಿಗ್ಗೆ 11 ಗಂಟೆ ಸುಮಾರಿಗೆಸಿಲ್ಕ್ಬೋರ್ಡ್ ಸಮೀಪದ ಅಂಡರ್ಪಾಸ್ ಬಳಿ ದಟ್ಟಣೆ ಹೆಚ್ಚಿದ್ದ ಕಾರಣ ಚಾಲಕ, ಅಂಡರ್ಪಾಸ್ ಬದಲು ಮೇಲ್ಸೇತುವೆ ಮೇಲೆ ಬಸ್ ಚಲಾಯಿಸಿಕೊಂಡು ಹೋಗಲು ಮುಂದಾಗಿದ್ದರು. ಅದೇ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಮಡಿವಾಳ ಸಂಚಾರ ಠಾಣೆಯ ಎಎಸ್ಐ ಗಿರಿಯಪ್ಪ, ಬಸ್ ನಿಲ್ಲಿಸುವಂತೆ ಕೈ ಮಾಡಿದ್ದರು. ಹಿಂದೆ ವಾಹನಗಳು ಬರುತ್ತಿದ್ದರಿಂದಾಗಿ, ಮುಂದಕ್ಕೆ ಹೋಗಿ ಬಸ್ ನಿಲ್ಲಿಸಲು ಚಾಲಕ ಮುಂದಾಗಿದ್ದರು. ಬಸ್ಸಿನ ಹಿಂದೆಯೇ ಓಡಿದ್ದ ಎಎಸ್ಐ, ಚಾಲಕನ ಸೀಟಿನ ಕಿಟಕಿಗೆ ಹೆಲ್ಮೆಟ್ ಎಸೆದಿದ್ದರು. ಆಗ ಗಾಜು ಒಡೆದಿತ್ತು. ಬಸ್ ನಿಲ್ಲಿಸಿ ಕೆಳಗೆ ಇಳಿದ ಚಾಲಕ, ಎಎಸ್ಐ ವರ್ತನೆಯನ್ನು ಪ್ರಶ್ನಿಸಿದ್ದರು.