‘ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಲ್ಕೈದು ಹಿರಿಯ ಸಾಹಿತಿಗಳಿಗೆ ‘ಗೌರವ ಪ್ರಶಸ್ತಿ’ ನೀಡುವ ಸಂಪ್ರದಾಯ ಈ ಹಿಂದೆ ಇತ್ತು. ಈಗ ‘ಗೌರವ ಪ್ರಶಸ್ತಿ’ ಮತ್ತು ‘ಸಾಹಿತ್ಯಶ್ರೀ’ ಪ್ರಶಸ್ತಿ ಎಂದು ಎರಡು ಬಗೆಯಲ್ಲಿ ಭೇದ ಕಲ್ಪಿಸಿ ಪ್ರಶಸ್ತಿ ನೀಡುತ್ತಿರುವುದು ಸಮಂಜಸವಾದುದಲ್ಲ. ಸಾಹಿತಿಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ ಪ್ರಶಸ್ತಿ ಕೊಡುತ್ತಿರುವುದು ತಾತ್ವಿಕವಾಗಿ ಸರಿಯಾದ ಕ್ರಮವಲ್ಲ. ಹೀಗಾಗಿ, ಈ ಪ್ರಶಸ್ತಿ ಸ್ವೀಕರಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ’ ಎಂದಿದ್ದಾರೆ.