ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಶನಿವಾರ ಭೇಟಿ ಮಾಡಿ, ದೂರು ಸಲ್ಲಿಸಲು ಶಾಸಕರ ಗುಂಪು ಶತಪ್ರಯತ್ನ ನಡೆಸಿತು. ಉಮೇಶ ಕತ್ತಿ, ಬಸನಗೌಡ ಪಾಟೀಲ ಯತ್ನಾಳ್, ಮುರುಗೇಶ ನಿರಾಣಿ ನೇತೃತ್ವದ ತಂಡ ನಡ್ಡಾ ಭೇಟಿಗೆ ಸಮಯವನ್ನೂ ಕೇಳಿತ್ತು. ‘ಇಂದು ಸಾಧ್ಯವಾಗದು; ಮಂಗಳವಾರ(ಮಾ.17ಕ್ಕೆ) ದೆಹಲಿಗೆ ಬನ್ನಿ’ ಎಂದು ನಡ್ಡಾ ಸೂಚಿಸಿದ್ದಾರೆ ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.