‘120 ಮನೆಗಳಿರುವ ಈ ಗ್ರಾಮದಲ್ಲಿ 600 ಜನರು ವಾಸಿಸುತ್ತಿದ್ದು, 200ಕ್ಕೂ ಅಧಿಕ ಜನರು ಕೀಲು ಹಾಗೂ ಮೂಳೆನೋವು ಬಾಧೆಯಿಂದ ಬಳಲುತ್ತಿದ್ದಾರೆ. ಹಣ ಇರುವವರು ಶಿವಮೊಗ್ಗ, ದಾವಣಗೆರೆ ಆಸ್ಪತ್ರೆಗಳಿಗೂ ಹೋಗಿ ತೋರಿಸಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಆರೋಗ್ಯ ಇಲಾಖೆಯ ಯಾರೊಬ್ಬರೂ ಭೇಟಿ ನೀಡಿಲ್ಲ’ ಎನ್ನುತ್ತಾರೆ ರೋಗಕ್ಕೆ ತುತ್ತಾಗಿರುವ ಹರೀಶ್, ಬಸವರಾಜು, ರವಿ, ತಿಪ್ಪೇಶಪ್ಪ, ಮಲ್ಲಿಕಾರ್ಜುನ್, ಸಚಿನ್, ರಾಜಪ್ಪ, ಷಡಕ್ಷರಿ, ಓಂಕಾರಪ್ಪ, ಕಿರಣ್.