ಈ ಕುರಿತು ಮಾತನಾಡಿದ ಹೂವಪ್ಪ, ಆರು ವರ್ಷಗಳಿಂದ ಮಗನಿಗೆ ರಕ್ತದ ವ್ಯವಸ್ಥೆ ಮಾಡುತ್ತಿದ್ದೆವು. ಬಹುತೇಕ ಸಂದರ್ಭದಲ್ಲಿ ನಾನು, ನನ್ನ ಹೆಂಡತಿ ರಕ್ತ ಕೊಟ್ಟಿದ್ದೆವು. ಕಾಲಕಾಲಕ್ಕೆ ಮಗುವಿಗೆ ರಕ್ತ ಕೊಡಬೇಕಾಗಿತ್ತು. ಅದಕ್ಕಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದೆವು. ಈಗ ಮಗನೇ ಸಾವಿಗೀಡಾಗಿದ್ದಾನೆ ಎಂದು ಕಣ್ಣೀರಾದರು.