ಬೆಂಗಳೂರು: ಜಿಂದಾಲ್ ಸಂಸ್ಥೆಗೆ ಭೂಮಿ ಮಂಜೂರು ಮಾಡುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬಿಜೆಪಿಯು ಭಾನುವಾರ (ಜೂನ್ 16) ಬೆಳಗ್ಗೆ ಮುಖ್ಯಮಂತ್ರಿ ಗೃಹ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಿರುವ ಬೆನ್ನಿಗೇ ಟ್ವೀಟ್ ಮಾಡಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ, ‘ಮುತ್ತಿಗೆ ಹಾಕುವ ಅಗತ್ಯವಿಲ್ಲ. ನಿಮ್ಮ ಸಮಯ ತಿಳಿಸಿ. ಜಿಂದಾಲ್, ಬರ, ಸಾಲಮನ್ನಾ ಕುರಿತಾಗಿ ನಿಮ್ಮ ಜತೆ ಚರ್ಚೆಗೆ ನಾನು ಸಿದ್ಧ,’ ಎಂದಿದ್ದಾರೆ.