<p><strong>ಬೆಂಗಳೂರು:</strong>ಪ್ರಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಬಹಳ ದಿನಗಳ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಧಾರಾವಾಹಿಯೊಂದರ ಶೀರ್ಷಿಕೆ ಗೀತೆ ಹಾಡಿದ್ದಾರೆ.</p>.<p>ಜುಲೈ 22ರಿಂದ ಸೋಮವಾರ ದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿರುವ ‘ರಕ್ಷಾ ಬಂಧನ’ದ ಶೀರ್ಷಿಕೆ ಗೀತೆ ಎಸ್.ಪಿ.ಬಿ ಅವರ ಸಿರಿ ಕಂಠದಿಂದ ಹೊರಹೊಮ್ಮಿದೆ.</p>.<p>‘ಕಲರ್ಸ್ ಕನ್ನಡವಾಗಿ ಬದಲಾಗುವ ಮೊದಲು ಈ ವಾಹಿನಿ ಈಟಿವಿ ಕನ್ನಡ ವಾಗಿತ್ತು. ಆಗ ಎಸ್.ಪಿ.ಬಿ. ಅವರು ನಡೆಸಿ ಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಕ್ಕಾಗಿ ಇಡೀ ಕರ್ನಾಟಕ ಕಾದು ಕುಳಿತಿರುತ್ತಿತ್ತು. ಬಹಳ ವರ್ಷಗಳ ನಂತರ ಇದೀಗ<br />ಎಸ್.ಪಿ.ಬಿ. ಅವರು ಕಿರುತೆರೆಗೆ ಮರಳಿ ದ್ದಾರೆ’ ಎಂದುವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್ನ ಬಿಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಹೇಳುತ್ತಾರೆ.</p>.<p>‘ನಮ್ಮ ಚಾನೆಲ್ಗೂ ಎಸ್.ಪಿ.ಬಿ. ಅವರಿಗೂ ಬಹಳ ಕಾಲದಿಂದಲೂ ನಂಟಿದೆ. ಅವರು ‘ರಕ್ಷಾಬಂಧನ’ದ ಶೀರ್ಷಿಕೆ ಗೀತೆ ಹಾಡಿರುವುದು ನಮ್ಮೆಲ್ಲರ ಪ್ರಯತ್ನಕ್ಕೆ ಬೆನ್ನು ತಟ್ಟಿದಂತಿದೆ. ಅಂಥ ದಿಗ್ಗಜರ ಜೊತೆಗೆ ಕೆಲಸ ಮಾಡಲು ನಮಗೆ ಅತೀವ ಹೆಮ್ಮೆಯಾಗುತ್ತಿದೆ’ ಎಂದು ಅವರು ಸಂತಸ ವ್ಯಕ್ತಪಡಿಸುತ್ತಾರೆ.</p>.<p>ಈಗ ಕನ್ನಡ ಕಿರುತೆರೆಯಲ್ಲಿ ಪ್ರಸಾರ ವಾಗುತ್ತಿರುವಕತೆಗಳಿಗಿಂತ ತೀರಾ ಭಿನ್ನವಾಗಿರುವ ಮತ್ತು ಕೌಟುಂಬಿಕ ಮೌಲ್ಯಗಳನ್ನು ಸಾರುವ ಧಾರಾವಾಹಿ ‘ರಕ್ಷಾಬಂಧನ’ ಎಂದು ಪರಮೇಶ್ವರ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಪ್ರಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಬಹಳ ದಿನಗಳ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಧಾರಾವಾಹಿಯೊಂದರ ಶೀರ್ಷಿಕೆ ಗೀತೆ ಹಾಡಿದ್ದಾರೆ.</p>.<p>ಜುಲೈ 22ರಿಂದ ಸೋಮವಾರ ದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿರುವ ‘ರಕ್ಷಾ ಬಂಧನ’ದ ಶೀರ್ಷಿಕೆ ಗೀತೆ ಎಸ್.ಪಿ.ಬಿ ಅವರ ಸಿರಿ ಕಂಠದಿಂದ ಹೊರಹೊಮ್ಮಿದೆ.</p>.<p>‘ಕಲರ್ಸ್ ಕನ್ನಡವಾಗಿ ಬದಲಾಗುವ ಮೊದಲು ಈ ವಾಹಿನಿ ಈಟಿವಿ ಕನ್ನಡ ವಾಗಿತ್ತು. ಆಗ ಎಸ್.ಪಿ.ಬಿ. ಅವರು ನಡೆಸಿ ಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಕ್ಕಾಗಿ ಇಡೀ ಕರ್ನಾಟಕ ಕಾದು ಕುಳಿತಿರುತ್ತಿತ್ತು. ಬಹಳ ವರ್ಷಗಳ ನಂತರ ಇದೀಗ<br />ಎಸ್.ಪಿ.ಬಿ. ಅವರು ಕಿರುತೆರೆಗೆ ಮರಳಿ ದ್ದಾರೆ’ ಎಂದುವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್ನ ಬಿಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಹೇಳುತ್ತಾರೆ.</p>.<p>‘ನಮ್ಮ ಚಾನೆಲ್ಗೂ ಎಸ್.ಪಿ.ಬಿ. ಅವರಿಗೂ ಬಹಳ ಕಾಲದಿಂದಲೂ ನಂಟಿದೆ. ಅವರು ‘ರಕ್ಷಾಬಂಧನ’ದ ಶೀರ್ಷಿಕೆ ಗೀತೆ ಹಾಡಿರುವುದು ನಮ್ಮೆಲ್ಲರ ಪ್ರಯತ್ನಕ್ಕೆ ಬೆನ್ನು ತಟ್ಟಿದಂತಿದೆ. ಅಂಥ ದಿಗ್ಗಜರ ಜೊತೆಗೆ ಕೆಲಸ ಮಾಡಲು ನಮಗೆ ಅತೀವ ಹೆಮ್ಮೆಯಾಗುತ್ತಿದೆ’ ಎಂದು ಅವರು ಸಂತಸ ವ್ಯಕ್ತಪಡಿಸುತ್ತಾರೆ.</p>.<p>ಈಗ ಕನ್ನಡ ಕಿರುತೆರೆಯಲ್ಲಿ ಪ್ರಸಾರ ವಾಗುತ್ತಿರುವಕತೆಗಳಿಗಿಂತ ತೀರಾ ಭಿನ್ನವಾಗಿರುವ ಮತ್ತು ಕೌಟುಂಬಿಕ ಮೌಲ್ಯಗಳನ್ನು ಸಾರುವ ಧಾರಾವಾಹಿ ‘ರಕ್ಷಾಬಂಧನ’ ಎಂದು ಪರಮೇಶ್ವರ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>