ಬೆಂಗಳೂರು: ಕೊರೊನಾ ವೈರಸ್ (ಕೋವಿಡ್–19) ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಬಳಕೆಯ ಅನಿವಾರ್ಯತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕದಾದ್ಯಂತ ಗುರುವಾರ ‘ಮಾಸ್ಕ್ ದಿನ’ ಆಚರಿಸಲಾಗುತ್ತಿದೆ.
ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಮಾಸ್ಕ್ ದಿನ ಆಚರಣೆಯಾಗುತ್ತಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿನ ವಿಧಾನಸೌಧ ಬಳಿಯ ಅಂಬೇಡ್ಕರ್ ಪ್ರತಿಮೆ ಎದುರು ಇದಕ್ಕೆ ಚಾಲನೆ ನೀಡಿದ್ದಾರೆ.
Karnataka government observes "Mask Day" by organising a march, with the participation of public representatives, and medical staff, near Vidhana Soudha.
— Deccan Herald (@DeccanHerald) June 18, 2020
CM @BSYBJP, Medical Education Minister @mla_sudhakar, actors @PuneethRajkumar and @raginidwivedi24 participated in the rally. pic.twitter.com/GfWPhxDCg5
ಮಾಸ್ಕ್ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು 18 ನೇ ಜೂನ್ 2020 ರ ಗುರುವಾರ ' ಮಾಸ್ಕ್ ದಿನ' ವನ್ನಾಗಿ ಘೋಷಿಸಲು ನಿರ್ಧರಿಸಿದೆ. ಈ ದಿನವನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೂ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ಅದೇಶದಲ್ಲಿ ತಿಳಿಸಿದ್ದಾರೆ. pic.twitter.com/DiL3bmXZiM
— Karnataka Varthe (@KarnatakaVarthe) June 17, 2020
#BBMP #staysafe #Bengaluru #BreakTheChain #Coronaindia #Covid_19india #coronavirusindia #COVID2019 #KarnatakaFightsCorona #BBMPFightsCovid19 #HealthyAtHome #ಬಿಬಿಎಂಪಿ #ಕೋವಿಡ್19 #masks #maskday@CMofKarnataka @KarnatakaVarthe @csogok pic.twitter.com/WeuatBlVi1
— B.H.Anil Kumar,IAS (@BBMPCOMM) June 16, 2020
ಮಾಸ್ಕ ದಿನ ಆಚರಿಸುವ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರವೇ ಮಾಧ್ಯಮಗಳಿಗೆ ತಿಳಿಸಿದ್ದರು. ‘ಮಾಸ್ಕ್ ಧರಿಸುವ ಅಗತ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದಲ್ಲಿ ‘ಮಾಸ್ಕ್ ದಿನ’ ಆಚರಿಸಲು ನಿರ್ಧರಿಸಲಾಗಿದೆ. ಯಾರು ಮಾಸ್ಕ್ ಧರಿಸುವುದಿಲ್ಲವೋ ಅವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಅವರಿಗೆ ₹200 ದಂಡ ವಿಧಿಸಲಾಗುವುದು,’ ಎಂದು ತಿಳಿಸಿದ್ದರು.
ಮಾಸ್ಕ್ ದಿನದ ಸಂದೇಶಗಳು
‘ಕೋವಿಡ್ ಸೋಂಕು ಹರಡುವಿಕೆ ತಡೆಯುವಲ್ಲಿ ಮಾಸ್ಕ್ ಗಳ ಪಾತ್ರ ಅತ್ಯಂತ ಮಹತ್ವವಾದದ್ದು. ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕೊರೊನಾದಿಂದ ರಕ್ಷಿಸಿಕೊಳ್ಳೋಣ,’ ಎಂದು ಮುಖ್ಯಮಂತ್ರಿಗಳ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.
ಕೋವಿಡ್ ಸೋಂಕು ಹರಡುವಿಕೆ ತಡೆಯುವಲ್ಲಿ ಮಾಸ್ಕ್ ಗಳ ಪಾತ್ರ ಅತ್ಯಂತ ಮಹತ್ವವಾದದ್ದು. ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕೊರೊನಾದಿಂದ ರಕ್ಷಿಸಿಕೊಳ್ಳೋಣ.#MaskDay2020#KarnatakaFightsCorona#Covid19@BSYBJP pic.twitter.com/9ZoHkDgbTD
— CM of Karnataka (@CMofKarnataka) June 18, 2020
‘ಕೊರೊನಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮಾಸ್ಕ್ ಧರಿಸುವುದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಇಂದು 'ಮಾಸ್ಕ್ ದಿನ' ಆಚರಿಸಲಾಗುತ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ. ಪ್ರತಿ ಬಾರಿ ಮನೆಯಿಂದ ಹೊರಗೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ. ಇತರರಿಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿ,’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಕೊರೊನಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮಾಸ್ಕ್ ಧರಿಸುವುದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಇಂದು 'ಮಾಸ್ಕ್ ದಿನ' ಆಚರಿಸಲಾಗುತ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ. ಪ್ರತೀ ಬಾರಿ ಮನೆಯಿಂದ ಹೊರಗೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ. ಇತರರಿಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿ. pic.twitter.com/LpGK82LwnM
— Dr Sudhakar K (@mla_sudhakar) June 18, 2020
‘ರಾಜ್ಯಾದ್ಯಂತ ಎಲ್ಲರೂ ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸೋಣ. 'ಮಾಸ್ಕ್ ದಿನ'ವನ್ನು ಯಶಸ್ವಿಗೊಳಿಸೋಣ. ಮಾಸ್ಕ್ ಗಳ ಮಹತ್ವ ಅರಿಯೋಣ, ಸ್ವಸ್ಥ ಸಮಾಜ ನಿರ್ಮಿಸೋಣ,’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವಿಟರ್ನಲ್ಲಿ ಮನವಿ ಮಾಡಿದ್ದಾರೆ.
ರಾಜ್ಯಾದ್ಯಂತ ಎಲ್ಲರೂ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸೋಣ. 'ಮಾಸ್ಕ್ ದಿನ'ವನ್ನು ಯಶಸ್ವಿ ಗೊಳಿಸೋಣ.
— B Sriramulu (@sriramulubjp) June 18, 2020
ಮಾಸ್ಕ್ ಗಳ ಮಹತ್ವ ಅರಿಯೋಣ, ಸ್ವಸ್ಥ ಸಮಾಜ ನಿರ್ಮಿಸೋಣ.#maskday pic.twitter.com/upOYISXFHR
‘ಶುಭೋದಯ ಗೆಳೆಯರೆ. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸಿ. ಹಾಗೆಯೇ ನಿಮ್ಮ ಸುರಕ್ಷತೆಗಾಗಿ ಮಾಸ್ಕ್ ಧರಿಸಿ,’ ಎಂದು ಟ್ರಾಫಿಕ್ ಪೋಲಿಸ್ ವಿಭಾಗ ಮನವಿ ಮಾಡಿದೆ.
"Mask Day" ಟ್ರೆಂಡಿಂಗ್
ಕರ್ನಾಟಕ ಇಂದು ಮಾಸ್ಕ್ ದಿನ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಟ್ವಿಟರ್ನಲ್ಲಿ ಹಲವರು ಸಂದೇಶ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ"Mask Day" ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ. ಮಾಸ್ಕ್ ಧರಿಸಬೇಕಾದ ಅಗತ್ಯ, ಅನಿವಾರ್ಯತೆ ಕುರಿತು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
State government has decided to observe Thursday June 18 as #MaskDay
— Aravind Limbavali (@ArvindLBJP) June 17, 2020
Let us all compulsorily wear masks and also spread awareness on the control of the spread of Covid 19 pic.twitter.com/rAgcm41wBS
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.