‘ಎಲ್ಲ ಪ್ರಕರಣಗಳ ತನಿಖೆ ಬಾಕಿ ಇದ್ದು, ಇನ್ನೂ ಅಂತಿಮ ವರದಿ ಸಲ್ಲಿಸಬೇಕಾಗಿದೆ’ ಎಂದು ಹಿರಿಯ ವಕೀಲರಾದ ವಿಜಯ್ ಹನ್ಸಾರಿಯಾ ಮತ್ತು ಸ್ನೇಹಾ ಕಲಿಟಾ ಅವರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ವರದಿ ಸಲ್ಲಿಸಲು ಈ ಇಬ್ಬರನ್ನು ನ್ಯಾಯಾಲಯದ ಸಹಾಯಕರಾಗಿ (ಆಮಿಕಸ್ ಕ್ಯೂರಿ) ನೇಮಿಸಲಾಗಿತ್ತು.