ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ನಾವು ಗೆದ್ದ ಕ್ಷಣದಿಂದ ಐದು ವರ್ಷಗಳವರೆಗೆ ಮುಕುಟವಿಲ್ಲದ ಮಹಾರಾಜರಂತೆ ವರ್ತಿಸುತ್ತೇವೆ. ಆದರೆ, ರಾಜನಾಗಿದ್ದ ರಾಮ, ಸಾಮಾನ್ಯ ಅಗಸನ ಮಾತಿಗೂ ಬೆಲೆ ನೀಡಿದ್ದ’ ಎಂದು ಹೇಳಿದರು.