‘ಸಾವಿರಾರು ವರ್ಷಗಳಿಂದಲೂ ದೇವರ ಮೂರ್ತಿಗಳು ಬಯಲಿನಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದ್ದವು. ಆ ದೈವಗಳ ಪಾದಗಳಿಗೆ ಸಾಮಾನ್ಯರು, ಶ್ರೀಮಂತರು ಸುಲಭವಾಗಿ ಹಣೆಹಚ್ಚಿ ನಮಸ್ಕಾರ ಮಾಡಬಹುದಿತ್ತು. ಆದರೆ, ಅವುಗಳ ಸುತ್ತ ಕ್ರಮೇಣ ಗೋಡೆಗಳನ್ನು ಕಟ್ಟಿ, ಭದ್ರವಾದ ಬಾಗಿಲುಗಳನ್ನು ಜೋಡಿಸಿ, ಪುರೋಹಿತನೆಂಬ ಕಾವಲುಗಾರರನ್ನು ನೇಮಿಸಲಾಯಿತು. ಇದರಿಂದ ವರಮಾನ ಗಳಿಸುವ ಪ್ರವೃತ್ತಿ ಬೆಳೆಯಿತು’ ಎಂದು ಅವರು ವಿವರಿಸಿದರು.