<p><strong>ಬೆಂಗಳೂರು:</strong>ರಾಜ್ಯದಿಂದ 342 ಮಂದಿ ದೆಹಲಿಯ ನಿಜಾಮುದ್ದೀನ್ ಸಭೆಗೆ ತೆರಳಿದ್ದಾರೆ, ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ, ಇವರನ್ನು ರಾತ್ರಿಯೊಳಗೆ ಪತ್ತೆಹಚ್ಚಲು ಪ್ರಯತ್ನಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.</p>.<p>ಇದೊಂದು ದೊಡ್ಡ ಸವಾಲು, ಇದನ್ನು ಗೃಹ ಮತ್ತು ಆರೋಗ್ಯ ಇಲಾಖೆಗಳು ಸಮರ್ಥವಾಗಿ ನಿಭಾಯಿಸಲಿವೆ ಎಂದು ಅವರು ಬುಧವಾರ ಮಾಧ್ಯಮದವರಿಗೆ ತಿಳಿಸಿದರು.</p>.<p>ಮಾರ್ಚ್ ಮೊದಲ ವಾರ ಮತ್ತು ಮೂರನೇ ವಾರ ದೆಹಲಿಯಲ್ಲಿ ಸಭೆ ನಡೆದಿದೆ. ಈ ಸಭೆಗೆ ಹೋದವರು ಇದ್ದರೆ ತಕ್ಷಣ ಸಹಾಯವಾಣಿ ಸಂಪರ್ಕಿಸಬೇಕು, ದೆಹಲಿಗೆ ಹೋದವರ ಕುಟುಂಬದ ಸದಸ್ಯರು, ಅವರು ಸಂಪರ್ಕಿಸಿರಬಹುದಾದ ಇತರ ವ್ಯಕ್ತಿಗಳನ್ನು ಪತ್ತೆಹಚ್ಚುವ ಕೆಲಸವನ್ನೂ ಸರ್ಕಾರ ಮಾಡುತ್ತದೆ ಎಂದು ಬೊಮ್ಮಾಯಿ ಹೇಳಿದರು.</p>.<p>ದೆಹಲಿಗೆ ಹೋಗಿದ್ದವರ ಪೈಕಿ 200 ಮಂದಿಯನ್ನು ಈಗಾಗಲೇ ಕ್ವಾರಂಟೈನ್ ನಲ್ಲಿ ಇಡಲಾಗಿದೆ, ರಾಜ್ಯದ 9 ಜಿಲ್ಲೆಯಷ್ಟೇ ಅಲ್ಲ, ಇತರ ಕೆಲವು ಜಿಲ್ಲೆಗಳಿಂದ ಸಹ ದೆಹಲಿಗೆ ಹೋಗಿರುವ ಶಂಕೆ ಇದೆ, ಹೀಗಾಗಿ ಇವರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ರಾಜ್ಯದಿಂದ 342 ಮಂದಿ ದೆಹಲಿಯ ನಿಜಾಮುದ್ದೀನ್ ಸಭೆಗೆ ತೆರಳಿದ್ದಾರೆ, ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ, ಇವರನ್ನು ರಾತ್ರಿಯೊಳಗೆ ಪತ್ತೆಹಚ್ಚಲು ಪ್ರಯತ್ನಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.</p>.<p>ಇದೊಂದು ದೊಡ್ಡ ಸವಾಲು, ಇದನ್ನು ಗೃಹ ಮತ್ತು ಆರೋಗ್ಯ ಇಲಾಖೆಗಳು ಸಮರ್ಥವಾಗಿ ನಿಭಾಯಿಸಲಿವೆ ಎಂದು ಅವರು ಬುಧವಾರ ಮಾಧ್ಯಮದವರಿಗೆ ತಿಳಿಸಿದರು.</p>.<p>ಮಾರ್ಚ್ ಮೊದಲ ವಾರ ಮತ್ತು ಮೂರನೇ ವಾರ ದೆಹಲಿಯಲ್ಲಿ ಸಭೆ ನಡೆದಿದೆ. ಈ ಸಭೆಗೆ ಹೋದವರು ಇದ್ದರೆ ತಕ್ಷಣ ಸಹಾಯವಾಣಿ ಸಂಪರ್ಕಿಸಬೇಕು, ದೆಹಲಿಗೆ ಹೋದವರ ಕುಟುಂಬದ ಸದಸ್ಯರು, ಅವರು ಸಂಪರ್ಕಿಸಿರಬಹುದಾದ ಇತರ ವ್ಯಕ್ತಿಗಳನ್ನು ಪತ್ತೆಹಚ್ಚುವ ಕೆಲಸವನ್ನೂ ಸರ್ಕಾರ ಮಾಡುತ್ತದೆ ಎಂದು ಬೊಮ್ಮಾಯಿ ಹೇಳಿದರು.</p>.<p>ದೆಹಲಿಗೆ ಹೋಗಿದ್ದವರ ಪೈಕಿ 200 ಮಂದಿಯನ್ನು ಈಗಾಗಲೇ ಕ್ವಾರಂಟೈನ್ ನಲ್ಲಿ ಇಡಲಾಗಿದೆ, ರಾಜ್ಯದ 9 ಜಿಲ್ಲೆಯಷ್ಟೇ ಅಲ್ಲ, ಇತರ ಕೆಲವು ಜಿಲ್ಲೆಗಳಿಂದ ಸಹ ದೆಹಲಿಗೆ ಹೋಗಿರುವ ಶಂಕೆ ಇದೆ, ಹೀಗಾಗಿ ಇವರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>