ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಪ್ರಯುಕ್ತ ಸೋಮವಾರ ನಡೆದ ರಾಷ್ಟ್ರೀಯ ಧರ್ಮ ಸಂಸತ್ 2018ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಧರ್ಮ ಮನುಷ್ಯರ ನಡುವಿನ ಸಹಬಾಳ್ವೆ, ಶಾಂತಿ, ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಬೇಕು. ವಸುಧೈವ ಕುಟುಂಬಕಂ ಎಂದರೆ ಎಲ್ಲ ಧರ್ಮದ ಜನರನ್ನೂ ಪ್ರೀತಿಸುವುದು ಎಂದರ್ಥ. ಇತರೆ ಧರ್ಮದ ಜನರನ್ನು ಸಹಿಸುಕೊಳ್ಳುವ, ಗೌರವಿಸುವ ಸಹಿಷ್ಣುತೆಯ ಸಂದೇಶವನ್ನು ಇಲ್ಲಿರುವ ಸಾಧು, ಸಂತರು ನೀಡಬೇಕು ಎಂದರು.