ಸಿ.ಎಂ. ಇಬ್ರಾಹಿಂ, ಬೋಜೇಗೌಡರು ಸರಳ, ಸಜ್ಜನ ಎಂದರು. ಆಗ ಮಧ್ಯ ಪ್ರವೇಶಿಸಿದ ಕೆಲ ಸದಸ್ಯರು, ಧರ್ಮೇಗೌಡರು ಉಪಸಭಾಪತಿ ಎಂದು ಗಮನಕ್ಕೆ ತಂದಿದ್ದಲ್ಲದೇ, ಭೋಜೇಗೌಡರ ಬಗ್ಗೆ ಆಡಿದ ಮಾತನ್ನು ವಾಪಸ್ ಪಡೆಯಬೇಕು’ ಎಂದು ಸಲಹೆ ಮಾಡಿದರು. ಆಯನೂರು ಮಂಜುನಾಥ ಮಾತನಾಡಿ, ‘ಧರ್ಮೇಗೌಡರ ತಂದೆ ಲಕ್ಷ್ಮಯ್ಯ ಅವರ ಜೊತೆಗೆ ಶಾಸಕನಾಗಿದ್ದೆ. ಈಗ ಅವರ ಇಬ್ಬರು ಮಕ್ಕಳೊಂದಿಗೂ ಶಾಸಕನಾಗಿದ್ದೇನೆ ಎಂದು ನೆನಪಿಸಿಕೊಂಡರು. ಅರ್ಜುನನನ್ನು ಕಟ್ಟಿ ಹಾಕುವುದು ಸುಲಭವಲ್ಲ’ ಎಂದರು.