ರೇಷ್ಮೆ ಮಾರುಕಟ್ಟೆ ವಹಿವಾಟು ಬಂದ್
ಕನಕಪುರ ರೇಷ್ಮೆಗೂಡು ಮಾರುಕಟ್ಟೆಗೂ ಬಂದ್ ಬಿಸಿ ತಟ್ಟಿದ್ದು, ವಹಿವಾಟು ಸ್ಥಗಿತಗೊಂಡಿದೆ. ಬೆಳಿಗ್ಗೆ ಹರಾಜು ಪ್ರಕ್ರಿಯೆ ಆರಂಭ ಆಗಬೇಕಿತ್ತು. ಆದರೆ ಈವರೆಗೆ ಹರಾಜು ನಡೆದಿಲ್ಲ. ಇದರಿಂದ ಗೂಡಿನ ತೂಕ ಕಡಿಮೆ ಆಗಲಿದ್ದು, ರೈತರು ನಷ್ಟ ಅನುಭವಿಸಲಿದ್ದಾರೆ. ಬೆಲೆಯೂ ಕುಸಿಯುವ ಸಾಧ್ಯತೆ ಇದೆ