‘ರಾಜ್ಯ ನಾಯಕರು ಭಿನ್ನಮತ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ನಿಮ್ಮಲ್ಲಿ ಸಹಮತ ಮೂಡದ ಹೊರತು ದೆಹಲಿಗೆ ಬರಬೇಡಿ’ ಎಂದು ಪಕ್ಷದ ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲೇ ಶನಿವಾರ ಪ್ರಮುಖರ ಸಭೆ ನಡೆಯಿತು. ಸಭೆ ಮಧ್ಯದಲ್ಲೇ ತೆರಳಿದ್ದ ಶಿವಕುಮಾರ್, ಭಾನುವಾರ ಭೇಟಿಯಾಗುವ ಮೂಲಕ ‘ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ, ಎಲ್ಲರೂ ಒಟ್ಟಾಗಿದ್ದೇವೆ’ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.