ಬಿಜೆಪಿಯವರು ಒಂದು ಕಡೆ ಚರ್ಚ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ಯಡಿಯೂರಪ್ಪ ಚರ್ಚ್ಗೆ ಭೇಟಿ ನೀಡುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ‘ಅವರವರ ನೀತಿ, ಧರ್ಮ, ಪಕ್ಷ ಹಾಗೂ ಅವರ ಓಟಿನ ವಿಚಾರ ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನಾವು ಯಾಕೆ ತಲೆ ಕೆಡೆಸಿಕೊಳ್ಳಬೇಕು. ನಮಗೆ ಎಲ್ಲಾ ಜನರೂ ಬೇಕು. ನಾನು ಯಾವತ್ತು ಓಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ’ ಎಂದರು.