ಮತದಾರರು ಈ ವಿದ್ಯಮಾನಗಳ ಬಗ್ಗೆ ಗಮನ ಹರಿಸಬೇಕು. ದೇಶದಲ್ಲಿ ಚುನಾವಣೆಯು ಅಭಿವೃದ್ಧಿ ಹೆಸರಿನಲ್ಲಿ ನಡೆಯಬೇಕೇ ಹೊರತು ವ್ಯಕ್ತಿ ಕೇಂದ್ರಿತವಾಗಿ ನಡೆಯಬಾರದು. ಮೋದಿಯವರು ಇದೇ 18 ರವರೆಗೆ ಮೈಸೂರು, ಬೆಂಗಳೂರು, ಮಂಗಳೂರು, ಕೋಲಾರ, ಬೆಳಗಾವಿ , ಹೈದರಾಬಾದ್- ಕರ್ನಾಟಕ ಪ್ರದೇಶದಲ್ಲಿ ಭಾಷಣ ಮಾಡುತ್ತಾರೆ. ಇದನ್ನು ದೂಷಿಸುವುದಿಲ್ಲ, ಜನತೆ ಇದನ್ನು ಗಮನಿಸಬೇಕು ಎಂದರು.