ಚಿತೆಯತ್ತ ನೆಗೆದ ಮರಿಯಾನೆ: ಕಳೇಬರಕ್ಕೆ ಬೆಂಕಿ ಹಚ್ಚಿದ ನಂತರ ಮರಿಯಾನೆಯನ್ನು ಸಕ್ರೆಬೈಲು ಆನೆಧಾಮಕ್ಕೆ ಸಾಗಿಸಲು ಪಿಕ್ಅಪ್ ಜೀಪಿಗೆ ಹತ್ತಿಸಲಾಗಿತ್ತು. ಆದರೆ, ಜೀಪಿನಿಂದ ಜಿಗಿದು ಚಿತೆಯತ್ತ ಓಡಿತ್ತು. ಮರಳಿ ಜೀಪಿಗೆ ಹತ್ತಿಸಲು ಪ್ರಯತ್ನಿಸಿದರೂ ಹತ್ತಲೇ ಇಲ್ಲ. ಸಕ್ರೆಬೈಲು ಶಿಬಿರದಿಂದ ಶುಕ್ರವಾರ ಸಾಕಾನೆ ತರಿಸಿ ಅದರ ನೆರವಿನೊಂದಿಗೆ ಸಾಗಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.