‘ಕೈಬರಹದಲ್ಲಿ ಬರೆದ ಪ್ರಶ್ನೆಪತ್ರಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಮುದ್ರಣಾಲಯಕ್ಕೆ ಕಳುಹಿಸಲಾಗುತ್ತದೆ. ಮುದ್ರಣದ ನಂತರ ಅದರ ಕರಡು ತಿದ್ದುವುದು ಅವರದೇ ಜವಾಬ್ದಾರಿ. ಅಲ್ಲಿಂದ ಮುಚ್ಚಿದ ಲಕೋಟೆಯಲ್ಲೇ ವಿಶ್ವವಿದ್ಯಾಲಯಕ್ಕೆ ಬರುತ್ತದೆ. ಹೀಗಾಗಿ ಇಲ್ಲಿ ಮುದ್ರಣಾಲಯದ ಲೋಪವೂ ಇದೆ. ಇವರಿಬ್ಬರ ವಿರುದ್ಧ ಕ್ರಮಕೈಗೊಳ್ಳುವುದರ ಬಗ್ಗೆ ಇದೇ 6ರ ಸಭೆಯಲ್ಲಿ ತೀರ್ಮಾನಿಸಲಾಗುವುದು’ ಎಂದರು.