ವಿಜಯಪುರ: ನನ್ನ ಜೀವ ಹೋದರೆ ಗಾಂಧಿ ಚೌಕ್ ಪಿಎಸ್ಐ ಶರಣಗೌಡ ಮತ್ತು ಬಸನಗೌಡ ಪಾಟೀಲ ಯತ್ನಾಳ ಕಾರಣ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಿಜೆಪಿಯ ಮುಖಂಡ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಆಪ್ತ ಬಾಬುಜಗದಾಳ ತಮ್ಮ ಫೇಸ್ಬುಕ್ ಪುಟದಲ್ಲಿ ಈ ಹೇಳಿಕೆ ಹಾಕಿದ್ದಾರೆ.
‘ನಿನ್ನನ್ನು ಆ್ಯಕ್ಸಿಡೆಂಟ್ ಮಾಡಿಸುವ ಪ್ಲ್ಯಾನ್ ಇದೆ. ನಿನ್ನ ನಾಯಕರು ನಾಳೆ ಹೆಣ ಇಟ್ಟು ಪ್ರತಿಭಟನೆ ಮಾಡ್ತಾರ, ಮತ್ ಮನೀಗೆ ಹೋಗಿ ಮಲಗ್ತಾರ’ ಎಂದು ಪಿಎಸ್ಐ ಹೇಳಿದ್ದಾರೆ ಎಂದು ತಾವೇ ಚಿತ್ರೀಕರಿಸಿ, ಪೋಸ್ಟ್ ಮಾಡಿದ್ದಾರೆ.