ಗಾಳಿ ವೇಗದಲ್ಲಿ ಕೊರೊನಾ ಹಬ್ಬುತ್ತಿದ್ದು ಅದನ್ನು ತಡೆಯುವುದಕ್ಕೆ ರಾಜ್ಯ ಸರ್ಕಾರ ಜಾತ್ರೆಗೂ ನಿರ್ಬಂಧ ಹೇರಿದೆ. ಆದರೆ, ತಾಲ್ಲೂಕಿನ ಮಲೆತಿರಿಕೆ ಬೆಟ್ಟದಲ್ಲಿ ನೂರಾರು ಮಂದಿ ಒಂದೆಡೆ ಸೇರಿ ಜಾತ್ರೆ ನಡೆಸಿದ್ದಾರೆ. ಬೆಟ್ಟದ ಮೇಲಿರುವ ಶಿವನ ದೇವಾಲಯದಲ್ಲಿ ನಡೆಯುವ ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳ ಜನರೂ ಸೇರಿದ್ದರು.