ರೈತರ ಆಕ್ರೋಶ: ಕಾರ್ಖಾನೆ ಆವರಣದಲ್ಲಿ ರೈತರಿಗೆ ಮೂಲ ಸೌಲಭ್ಯವಿಲ್ಲ. ಇದ್ದ ಒಂದು ಆಸ್ಪತ್ರೆಯೂ ಬಂದ್ ಆಗಿದೆ. ವೈದ್ಯರು ಸಿಕ್ಕಿದ್ದರೆ ರೈತನನ್ನು ಬದುಕಿಸಬಹುದಾಗಿತ್ತು. ಕಾರ್ಖಾನೆ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.