ಪುಟ್ಟರಾಜು– ಮಾದೇಗೌಡ ಭೇಟಿ: ಧರಣಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷಡಾ.ಜಿ.ಮಾದೇಗೌಡ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿದರು. ಶುಕ್ರವಾರ ಸಚಿವ ಸಂಪುಟ ಸಭೆ ನಡೆಯಲಿದ್ದು, ಜಿಲ್ಲೆಯ ರೈತರ ಸ್ಥಿತಿಯನ್ನು ಸಭೆಯ ಮುಂದಿಡಲು ಸಚಿವರು ಮಾದೇಗೌಡರ ಸಲಹೆ ಪಡೆದರು.