‘ನಾಂದೆಡ್ಎಕ್ಸ್ಪ್ರೆಸ್ ರೈಲಿನಲ್ಲಿ 2013ರಲ್ಲಿ ಅಗ್ನಿ ಅವಘಡ ಸಂಭವಿಸಿದಾಗ 23 ಸುಟ್ಟ ಶವಗಳ ಸ್ಪಷ್ಟ ಗುರುತನ್ನು ಪತ್ತೆ ಹಚ್ಚುವಲ್ಲಿ, ಬೆಂಗಳೂರಿನಲ್ಲಿ 2008ರಲ್ಲಿ ನಡೆದ ಸರಣಿ ಸ್ಫೋಟಗಳು, 2013ರಲ್ಲಿ ಮಲ್ಲೇಶ್ವರದಲ್ಲಿ ಮತ್ತು 2014ರಲ್ಲಿ ಚರ್ಚ್ ಸ್ಟ್ರೀಟ್ನಲ್ಲಿ ನಡೆದ ಸ್ಫೋಟ ಪ್ರಕರಣಗಳನ್ನು ಭೇದಿಸುವಲ್ಲಿ ವಿಧಿ ವಿಜ್ಞಾನ ತಂಡದಶ್ರಮ ಹೆಚ್ಚಿದೆ. ಈ ವಿಜ್ಞಾನದ ಸಿಬ್ಬಂದಿಯ ಸಹಕಾರದಿಂದಲೇ ಗೌರಿ ಲಂಕೇಶ್ ಮತ್ತು ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಗಳ ತನಿಖೆ ತ್ವರಿತವಾಗಿ ನಡೆಯುತ್ತಿದೆ’ ಎಂದು ಡಿಜಿ–ಐಜಿಪಿ ಎನ್.ನೀಲಮಣಿ ರಾಜು ನೆನಪಿಸಿದರು.