ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯಕ, ‘ಮೂರು ತಲೆಮಾರು ಹಿಂದಿನ ವಾಸ್ತವ್ಯದ ದಾಖಲೆಗಳನ್ನು ಕೊಡಲಿಲ್ಲ ಎಂದುಅಧಿಕಾರಿಗಳು ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಆದರೆ, ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸುವಂತಿಲ್ಲ. ಮೂರು ದಶಕಗಳಿಂದ ಜನವಸತಿ ಇರುವುದನ್ನು ಸಾಬೀತುಪಡಿಸಿದರೆ ಸಾಕು ಎಂದು ವೀರಪ್ಪ ಮೊಯಿಲಿನೇತೃತ್ವದ ರಾಜ್ಯಸರ್ಕಾರ ತಿಳಿಸಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.