ಹಿನ್ನೀರಿನಲ್ಲಿ ಹಾಕಲಾಗಿದ್ದ ಬಲೆಯನ್ನು ಸಿಬ್ಬಂದಿ ತೆಗೆಯುತ್ತಿದ್ದಾಗ 10 ರಿಂದ 15 ತೆಪ್ಪಗಳಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆಗ ಮಹದೇವ್, ಮಹೇಶ್, ಬೊಮ್ಮ ಹಾಗೂ ಶಿವಕುಮಾರ್ ಅವರಿದ್ದ ತೆಪ್ಪಮುಳುಗಿದೆ. ಮಹದೇವ್ ಈಜಿ ದಡಸೇರಿದ್ದಾರೆ. ಬೊಮ್ಮ ಅವರನ್ನು ಇತರೆ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆ ಕುರಿತ ಹೆಚ್ಚಿನ ಮಾಹಿತಿಗೆ ಡಿಆರ್ಎಫ್ಒ ಕುಮಾರಸ್ವಾಮಿ ಹಾಗೂ ಬೊಮ್ಮ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಪ್ರಯತ್ನಿಸಲಾಯಿತು. ಆದರೆ, ಇಬ್ಬರೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.