ಅಧಿಕ ಲಾಭಾಂಶದ ಆಸೆಯಿಂದ 2016ರಲ್ಲಿ ₹10 ಲಕ್ಷ, 2018ರಲ್ಲಿ ₹2ಲಕ್ಷ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಅವರಿಗೆ₹5.50 ಲಕ್ಷ ವಾಪಸ್ಸು ನೀಡಲಾಗಿದೆ. ₹1ಲಕ್ಷಕ್ಕೆ ಶೇ.36ರಷ್ಟು ಬಡ್ಡಿ ಸಿಗುತ್ತದೆ ಎಂದು ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಹೊಸಪೇಟೆಯಲ್ಲಿನ ದೂರು ದಾಖಲಾಗಿರುವುದು ತಿಳಿಯುತ್ತಿದ್ದಂತೆ ಅಬ್ದುಲ್ ತವಾಬ್ ಇಲ್ಲಿನ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.