ಯಾಕಾಪುರದ ಅಂಗನವಾಡಿ ಕೇಂದ್ರದ ಬಳಿ ಮುಲ್ಲಾಮರಿ ಯೋಜನೆ ಕಾಲುವೆ ಮೇಲೆ ಬಾಲಕಿ ಶವವಾಗಿ ಬಿದ್ದಿದ್ದಾಳೆ ಎಂದು ದಾರಿಹೋಕರು ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು, ಆಕೆಯ ಪಾಲಕರಿಗೂ ವಿಷಯ ಮುಟ್ಟಿಸಿದರು. ಬಾಲಕಿಯ ಉಡುಪು ಅಸ್ತವ್ಯಸ್ತವಾಗಿದ್ದು, ಗುಪ್ತಾಂಗದ ಬಳಿ ಸಾಕಷ್ಟು ರಕ್ತಸ್ರಾವವಾಗಿತ್ತು. ಆರೋಪಿ ಯಲ್ಲಪ್ಪನ ಒಳ ಉಡುಪು ಕೂಡ ಹತ್ತಿರದಲ್ಲೇ ಸಿಕ್ಕಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು ತಿಳಿಸಿದ್ದಾರೆ.