<p><strong>ಬೆಂಗಳೂರು:</strong> ಕೊರೊನಾ ಹರಡುವಿಕೆಯನ್ನು ‘ಅಸಾಧಾರಣ ಪರಿಸ್ಥಿತಿ‘ ಎಂದು ಪರಿಗಣಿಸಿರುವ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಿದೆ.</p>.<p>ರಾಜ್ಯದ 6,025 ಗ್ರಾಮ ಪಂಚಾಯಿತಿಗಳ ಪೈಕಿ, ಜೂನ್ನಿಂದ ಆಗಸ್ಟ್ ಮಧ್ಯೆ ಸುಮಾರು 5,800 ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಚುನಾವಣೆ ನಡೆಸುವ ಕುರಿತು ಜಿಲ್ಲಾಧಿಕಾರಿಗಳು ನೀಡಿದ ವರದಿ ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಆಯೋಗ ಸ್ಪಷ್ಟಪಡಿಸಿದೆ.</p>.<p>‘ಕೋವಿಡ್ 19 ನಿಯಂತ್ರಣದಲ್ಲಿ ಜಿಲ್ಲಾಡಳಿತ ತೊಡಗಿದ್ದು, ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ಹಾಗೂ ಸಾರಿಗೆ ವ್ಯವಸ್ಥೆ ಒದಗಿಸಲು ತೊಂದರೆಯಾಗಬಹುದು. ಚುನಾವಣೆ ನಡೆಸಿದರೆ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಲಿದ್ದು, ಕೋವಿಡ್ ನಿಯಂತ್ರಣಕ್ಕೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಮುಂದೂಡಲಾಗಿದೆ ’ ಎಂದೂ ಆಯೋಗ ತಿಳಿಸಿದೆ.</p>.<p>‘ಕಿಷನ್ ಸಿಂಗ್ ತೋಮರ್ ಮತ್ತು ಅಹಮದಾಬಾದ್ನ ಸಿಟಿ ಮುನಿಸಿಪಲ್ ಕಾರ್ಪೊರೇಷನ್ ಪ್ರಕರಣದಲ್ಲಿ, ನೈಸರ್ಗಿಕ ವಿಪತ್ತಿನಿಂದ ಚುನಾವಣೆ ನಡೆಸುವುದು ಪ್ರಾಧಿಕಾರಗಳಿಗೆ ಕಷ್ಟವಾದರೆ ಅಂಥ ಪರಿಸ್ಥಿತಿಯನ್ನು ಅಸಾಧಾರಣ ಪರಿಸ್ಥಿತಿ ಎಂದು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ’ ಎಂದೂ ಆಯೋಗ ಸಮರ್ಥನೆ ನೀಡಿದೆ.</p>.<p><strong>ಕಾರ್ಮಿಕ ಕಾಯ್ದೆ ಮರು ತಿದ್ದುಪಡಿ</strong></p>.<p>‘ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ತಿದ್ದುಪಡಿ ಮುಖೇನ ಹೆಚ್ಚಿಸಿದ್ದ ಕೆಲಸದ ಅವಧಿಯನ್ನು ಇಳಿಸಲು ಸೂಚಿಸಲಾಗಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.</p>.<p>ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಕೇಂದ್ರದ ಸೂಚನೆಯಂತೆ ತಿದ್ದುಪಡಿ ಪರಿಷ್ಕರಿಸಿ ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಓವರ್ ಟೈಂ 125 ದಿನಗಳು ಇದ್ದು, ಅದನ್ನು ಕಡಿಮೆ ಮಾಡುವಂತೆಯೂ ಹೇಳಿದೆ. ಕೇಂದ್ರ ಹಿಂದಕ್ಕೆ ಕಳಿಸಿರುವುದರಿಂದ ಮುಂದಿನ ತಿದ್ದುಪಡಿ ಆಗುವವರೆಗೆ ಕೆಲಸದ ಈ ಹಿಂದಿನಂತೆಯೇ ಇರಲಿದೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೊರೊನಾ ಹರಡುವಿಕೆಯನ್ನು ‘ಅಸಾಧಾರಣ ಪರಿಸ್ಥಿತಿ‘ ಎಂದು ಪರಿಗಣಿಸಿರುವ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಿದೆ.</p>.<p>ರಾಜ್ಯದ 6,025 ಗ್ರಾಮ ಪಂಚಾಯಿತಿಗಳ ಪೈಕಿ, ಜೂನ್ನಿಂದ ಆಗಸ್ಟ್ ಮಧ್ಯೆ ಸುಮಾರು 5,800 ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಚುನಾವಣೆ ನಡೆಸುವ ಕುರಿತು ಜಿಲ್ಲಾಧಿಕಾರಿಗಳು ನೀಡಿದ ವರದಿ ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಆಯೋಗ ಸ್ಪಷ್ಟಪಡಿಸಿದೆ.</p>.<p>‘ಕೋವಿಡ್ 19 ನಿಯಂತ್ರಣದಲ್ಲಿ ಜಿಲ್ಲಾಡಳಿತ ತೊಡಗಿದ್ದು, ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ಹಾಗೂ ಸಾರಿಗೆ ವ್ಯವಸ್ಥೆ ಒದಗಿಸಲು ತೊಂದರೆಯಾಗಬಹುದು. ಚುನಾವಣೆ ನಡೆಸಿದರೆ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಲಿದ್ದು, ಕೋವಿಡ್ ನಿಯಂತ್ರಣಕ್ಕೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಮುಂದೂಡಲಾಗಿದೆ ’ ಎಂದೂ ಆಯೋಗ ತಿಳಿಸಿದೆ.</p>.<p>‘ಕಿಷನ್ ಸಿಂಗ್ ತೋಮರ್ ಮತ್ತು ಅಹಮದಾಬಾದ್ನ ಸಿಟಿ ಮುನಿಸಿಪಲ್ ಕಾರ್ಪೊರೇಷನ್ ಪ್ರಕರಣದಲ್ಲಿ, ನೈಸರ್ಗಿಕ ವಿಪತ್ತಿನಿಂದ ಚುನಾವಣೆ ನಡೆಸುವುದು ಪ್ರಾಧಿಕಾರಗಳಿಗೆ ಕಷ್ಟವಾದರೆ ಅಂಥ ಪರಿಸ್ಥಿತಿಯನ್ನು ಅಸಾಧಾರಣ ಪರಿಸ್ಥಿತಿ ಎಂದು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ’ ಎಂದೂ ಆಯೋಗ ಸಮರ್ಥನೆ ನೀಡಿದೆ.</p>.<p><strong>ಕಾರ್ಮಿಕ ಕಾಯ್ದೆ ಮರು ತಿದ್ದುಪಡಿ</strong></p>.<p>‘ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ತಿದ್ದುಪಡಿ ಮುಖೇನ ಹೆಚ್ಚಿಸಿದ್ದ ಕೆಲಸದ ಅವಧಿಯನ್ನು ಇಳಿಸಲು ಸೂಚಿಸಲಾಗಿದೆ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.</p>.<p>ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಕೇಂದ್ರದ ಸೂಚನೆಯಂತೆ ತಿದ್ದುಪಡಿ ಪರಿಷ್ಕರಿಸಿ ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ಓವರ್ ಟೈಂ 125 ದಿನಗಳು ಇದ್ದು, ಅದನ್ನು ಕಡಿಮೆ ಮಾಡುವಂತೆಯೂ ಹೇಳಿದೆ. ಕೇಂದ್ರ ಹಿಂದಕ್ಕೆ ಕಳಿಸಿರುವುದರಿಂದ ಮುಂದಿನ ತಿದ್ದುಪಡಿ ಆಗುವವರೆಗೆ ಕೆಲಸದ ಈ ಹಿಂದಿನಂತೆಯೇ ಇರಲಿದೆ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>