ಹೊಸಪೇಟೆ: ಜನವರಿ 31ರಂದು ಹಮ್ಮಿಕೊಂಡಿದ್ದ ಕವಿ ಕಾವ್ಯ ಸಂಭ್ರಮ, ಫೆಬ್ರುವರಿ 1ಕ್ಕೆ ನಿಗದಿಯಾಗಿದ್ದ ಬೆಳ್ಳಿಹಬ್ಬದ ಸಮಾರೋಪ ರದ್ದುಪಡಿಸಲಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲಿಕಾ ಎಸ್. ಘಂಟಿ ಹೇಳಿದರು.
ಸಮಾರಂಭಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್ ಅವರನ್ನು ಆಹ್ವಾನಿಸಿದ್ದರಿಂದ ವಿವಾದ ಉಂಟಾಗಿತ್ತು. ’ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆಗಿದ್ದರಿಂದ ಬೆಳ್ಳಿಹಬ್ಬ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮಲ್ಲಿಕಾ ಘಂಟಿ ಹೇಳಿಕೆ.
ಜ.30ಕ್ಕೆ ಘಟಿಕೋತ್ಸವ(ನುಡಿಹಬ್ಬ) ನಡೆಯಲಿದ್ದು, ಇಬ್ಬರಿಗೆ ಡಿ.ಲಿಟ್., 87 ಜನಕ್ಕೆ ಪಿಎಚ್.ಡಿ., 26 ಮಂದಿಗೆ ಎಂ.ಫಿಲ್ ಸೇರಿದಂತೆ ವಿವಿಧ ಕೋರ್ಸ್ ಮುಗಿಸಿರುವ ಒಟ್ಟು 645 ಜನರಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ವಿಜ್ಞಾನಿ ಎ.ಎಸ್.ಕಿರಣ ಕುಮಾರ ನುಡಿಹಬ್ಬ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪದವಿ ಪ್ರದಾನ ಮಾಡಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದಾರೆ.