ಮಳೆಗಾಲದಲ್ಲಿ ಹಳ್ಳಗಳು ತುಂಬಿ ಹರಿಯುವುದರಿಂದ ಜಮೀನುಗಳಿಗೆ ಹೋಗಲು ತಾವೇ ಕಾಲು ಸಂಕ ನಿರ್ಮಿಸಿಕೊಳ್ಳುತ್ತಾರೆ. ಜೋರು ಮಳೆಗೆ ಈ ಸಂಕವೂ ಮುಚ್ಚಿ ಹೋಗಿ ಹೊರ ಜಗತ್ತಿನ ಸಂಪರ್ಕವೇ ಕಡಿತಗೊಳ್ಳುತ್ತದೆ. ಜಮೀನಿಗೆ ಹೋಗಲು ನೀರಿನ ಮಟ್ಟ ಕಡಿಮೆ ಆಗುವ ತನಕ ಕಾಯಬೇಕು. ಗ್ರಾಮಸ್ಥರು ಹಳ್ಳ ದಾಟುವಾಗ ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿರುವ ನಿದರ್ಶನವೂ ಉಂಟು.