‘ಕವನದಲ್ಲಿ ಆಕ್ಷೇಪಿಸುವಂಥದ್ದು ಏನಿದೆ? ನಿಸಾರ್ ಅಹಮದ್ ಅವರು ‘ಕುರಿಗಳು ಸಾರ್ ಕುರಿಗಳು’ ಬರೆದಿದ್ದು ರಾಜಕಾರಣಿಗಳನ್ನು ಉದ್ದೇಶಿಸಿಯೇ. ಆಗ ಅವರನ್ನು ಬಂಧಿಸಲಾಗಿತ್ತೇ? ಅಡಿಗರು ಹಿಂದೊಂದು ಬಾರಿ ಬರೆದ ಕವನವೊಂದು ಚರ್ಚೆಗೆ ಗುರಿಯಾಗಿತ್ತು. ಆದರೆ, ಈಗ ಸಾಹಿತಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಜಾಮೀನಿಗಾಗಿ ಅಲೆಯುವಂತೆ ಮಾಡಲಾಗಿದೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.