ಹಾವೇರಿ: ಹಿರೇಕೆರೂರು ತಾಲ್ಲೂಕಿನಲ್ಲಿ (ರಟ್ಟೀಹಳ್ಳಿ ತಾಲ್ಲೂಕು ಸೇರಿ) 126 ಗ್ರಾಮಗಳಿದ್ದು, ಆ ಪೈಕಿ 84 ಗ್ರಾಮಗಳಲ್ಲಿ ಜಲಕ್ಷಾಮ ಉಂಟಾಗಿದೆ. ಕೋಡದಲ್ಲಿ 11 ಖಾಸಗಿ ಕೊಳವೆ ಬಾವಿಗಳ ನೀರು ಖರೀದಿಸಿ ಪೂರೈಕೆ ಮಾಡಲಾಗುತ್ತಿದೆ. ಜನ ನೀರಿಗಾಗಿ ಖಾಸಗಿ ಟ್ಯಾಂಕರ್ಗಳನ್ನೇ ಆಶ್ರಯಿಸಿದ್ದಾರೆ.
ಕುಮದ್ವತಿ ನದಿಯಿಂದ ದುರ್ಗಾ ದೇವಿ ಕೆರೆಗೆ ನೀರು ತರುವ ಕಾಮಗಾರಿ ಕುಂಟುತ್ತಾ ಸಾಗಿದೆ. ತಾಲ್ಲೂಕಿನ 285 ಕೆರೆ ತುಂಬಿಸುವ ಸರ್ವಜ್ಞ ಏತ ನೀರಾವರಿ ಯೋಜನೆ ಜಾರಿಗೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿರುವಾಗಶಾಸಕ ಬಿ.ಸಿ.ಪಾಟೀಲ ಅವರು ತಮಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ರಾಜೀನಾಮೆ ನೀಡಿದ್ದಾರೆ.