‘ಆದಿಲ್ಶಾಹಿ, ಹೈದರಾಲಿಯ ಇತಿಹಾಸ ಕಿತ್ತು ಹಾಕ್ತಾರಾ. ಹಾಗಿದ್ದರೆ ಎಲ್ಲಿಂದ ಎಲ್ಲಿಗೆ ಇತಿಹಾಸ ತೆಗೆಯುತ್ತೇವೆ ಎಂಬುದನ್ನು ಬಿಜೆಪಿಯವರು ಹೇಳಬೇಕು. ಏಕೆಂದರೆ ಬ್ರಿಟಿಷರ ವಿರುದ್ಧ ಮೊದಲು ಹೋರಾಟ ಮಾಡಿದ್ದು ಟಿಪ್ಪು. ರಾಷ್ಟ್ರ ಉಳಿಸಿಕೊಳ್ಳಲು ಮಕ್ಕಳನ್ನು ಅಡವಿಟ್ಟ ತ್ಯಾಗಿ ಟಿಪ್ಪು‘ ಎಂದು ಬಣ್ಣಿಸಿದ ಅವರು, ‘ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪು ಇತಿಹಾಸ ಅವಿಭಾಜ್ಯ ಅಂಗವಾಗಿದೆ. ಮತೀಯತೆ ಆಧಾರದ ಮೇಲೆ ಇತಿಹಾಸ ಬರೆಯುವ ಪ್ರವೃತ್ತಿಯ ದುರಂತ ಪ್ರಜಾಪ್ರಭುತ್ವದಲ್ಲಿ ಮತ್ತೊಂದಿಲ್ಲ‘ ಎಂದರು.