'ಬಂಡವಾಳ ಹೂಡಿಕೆಗೆ ಸಂಸ್ಥೆಗಳನ್ನು ಆಕರ್ಷಿಸಲು ಎಲ್ಲ ರಾಜ್ಯಗಳು ಕಾಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ವ್ಯಕ್ತವಾದರೆ ರಾಜ್ಯದಲ್ಲಿ ಯಾರು ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಾರೆ? ಹಿಂದೆ ಭೂಮಿ ತೆಗೆದುಕೊಂಡಾಗ ಬೆಲೆ ಕಮ್ಮಿ ಇದ್ದು ಈಗ ಬೆಲೆ ಏರಿದರೆ ಏನು ಮಾಡಲು ಸಾಧ್ಯ? ವಿರೋಧ ಪಕ್ಷದ ಬಗ್ಗೆ ಗೌರವವಿದೆ,ವಾಚ್ ಡಾಗ್ ಆಗಿ ವಿರೋಧ ಪಕ್ಷ ಕೆಲಸ ಮಾಡಬೇಕು. ಜಮೀನು ನೀಡುವ ವಿಚಾರದಲ್ಲಿ ಸಚಿವ ಸಂಪುಟದ ಉಪ ಸಮಿತಿಯು ಇದೀಗ ಪುನರ್ ಪರಿಶೀಲನೆ ಮಾಡಲು ನಿರ್ಧರಿಸಿದೆ' ಎಂದರು.