ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಪಡಿತರ ಚೀಟಿದಾರರ ಯಾವುದೇ ಒಬ್ಬ ಸದಸ್ಯರ ಮೊಬೈಲ್ಗೆ ಒಟಿಪಿ ಬರಲಿದೆ. ಅದನ್ನು ಪಿಒಎಸ್ನಲ್ಲಿ ದಾಖಲಿಸಿ ಪಡಿತರ ನೀಡಲಾಗುವುದು ಎಂದರು. ಬುಧವಾರದಿಂದ ಎಪಿಎಂಸಿಯಲ್ಲಿ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿವಿತರಣೆ ಒಂದು ವಾರ ಸ್ಥಗಿತಗೊಳ್ಳಲಿದ್ದರೂ, ಪೂರೈಕೆಯಲ್ಲಿ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದ ಅವರು, ಸಾಮಾನ್ಯ ಅಂಗಡಿಗಳಲ್ಲಿ ಸದ್ಯದ ಪರಿಸ್ಥಿತಿಯ ಲಾಭ ಪಡೆಯಲುಅಕ್ರಮ ದಾಸ್ತಾನು, ಅಧಿಕ ಬೆಲೆಗೆ ಮಾರಾಟ ಮಾಡುವ ದಂಧೆ ವಿರುದ್ಧ ನಿರಂತರ ದಾಳಿ, ದಂಡ ವಿಧಿಸಲಾಗುವುದು ಎಂದರು.