‘ಈ ಬಾರಿ ಕಲಬುರ್ಗಿ ಜಿಲ್ಲೆಯಲ್ಲಿ ತೊಗರಿ ಬೆಳೆ ಇಳುವರಿ ದಾಖಲೆ ಪ್ರಮಾಣದಲ್ಲಿ ಆಗಿದೆ. ಆದರೆ, ಕೇಂದ್ರ ಸರ್ಕಾರ ಪ್ರತಿಯೊಬ್ಬ ರೈತರಿಂದ ಬೆಂಬಲ ಬೆಲೆಯಡಿ ಕೇವಲ 10 ಕ್ವಿಂಟಲ್ ಖರೀದಿ ಮಾಡುತ್ತಿದೆ. ನಾವು ಉಳಿದವರ ಭಾಷಣಕ್ಕೆ ಅಡ್ಡಿ ಮಾಡಿಲ್ಲ. ಆದರೆ, ಸರ್ಕಾರದ ಪ್ರತಿನಿಧಿಯಾಗಿರುವ ನಿಮ್ಮ ಭಾಷಣ ನಡೆಯಲು ಬಿಡುವುದಿಲ್ಲ‘ ಎಂದು ಮಾನ್ಪಡೆ ಪಟ್ಟು ಹಿಡಿದರು.