ಕೊಪ್ಪಳ: ತಾಲ್ಲೂಕಿನಹನುಮನಹಟ್ಟಿಯಲ್ಲಿ 60 ಎಕರೆಯಲ್ಲಿ50ಕ್ಕೂ ಹೆಚ್ಚು ರೈತರು ಕನಕಾಂಬರ ಬೆಳೆದಿದ್ದಾರೆ. ಮಾರುಕಟ್ಟೆಯಿಲ್ಲದೇ ಹೂವುಗಳ ಗಿಡದಲ್ಲೇ ಬಾಡುತ್ತಿವೆ.
ಕೊಪ್ಪಳ ತಾಲ್ಲೂಕಿನ ಇರಕಲ್ಲಗಡಾ ಹೋಬಳಿಯ ಹನಮನಟ್ಟಿಯ ರೈತ ಪರಮೇಶ್ವರ ಗೌಡ ಅವರು ತಮ್ಮ ಜಮೀನಿನಲ್ಲಿ ಬೆಳೆದ ಕನಕಾಂಬರವನ್ನು ಮಾರುಕಟ್ಟೆಗೆ ಸಾಗಿಸದೇ ಹಾಗೆ ಬಿಟ್ಟಿದ್ದಾರೆ
ಎರಡು ತಿಂಗಳಿನಿಂದ ಹೂವು ಕೊಳ್ಳುವವರು ಇಲ್ಲ. ಹೂವುಗಳು ಗಿಡದಲ್ಲಿಯೇ ಅರಳಿ ಭೂಮಿ ಪಾಲಾಗುತ್ತಿವೆ.
‘ನಿತ್ಯ 6 ಕೆ.ಜಿ.ಯಷ್ಟು ಹೂವು ಬಿಡಿಸಿ ಪ್ರತಿ ಕೆ.ಜಿ ಗೆ ₹250ಕ್ಕೆ ಮಾರುತ್ತಿದ್ದೇವು. 1 ಕೆ.ಜಿ ಹೂವು ಬಿಡಿಸಲು ₹ 100 ಕೂಲಿ ನೀಡುತ್ತಿದ್ದೆವು. ಈಗಿನ ಸ್ಥಿತಿಯಲ್ಲಿ ನಮಗಷ್ಟೇ ಅಲ್ಲ, ಕೂಲಿಯವರಿಗೂ ಸಂಕಷ್ಟ ಎದುರಾಗಗಿದೆ’ ಎನ್ನುತ್ತಾರೆ ಈ ರೈತರು.
'ಒಂದು ಎಕರೆಯಲ್ಲಿ ಹೂವು ಬೆಳೆದಿದ್ದೇನೆ. ₹ 1 ಲಕ್ಷ ಆದಾಯ ನಿರೀಕ್ಷಿಸಿದ್ದೆ. ಈಗ ಗ್ರಾಹಕರಿಲ್ಲದೆ ಹೊಲದಲ್ಲೇ ಬಿಟ್ಟಿದ್ದೇನೆ' ಎನ್ನುತ್ತಾರೆ ರೈತ ಪರಮೇಶ್ವರಗೌಡ.