ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಕುಮಾರಸ್ವಾಮಿ 2006–07ರಲ್ಲಿ ಗ್ರಾಮವಾಸ್ತವ್ಯ ಮಾಡಿದಾಗ ಎಲ್ಲಿ ಊಟ ಮಾಡಿದ್ದರು, ಎಲ್ಲಿ ಮಲಗಿದ್ದರು ಎಂಬುದು ಗೊತ್ತಿದೆ. ಆಗ ಕೊಟ್ಟ ಯಾವ ಭರವಸೆಯನ್ನು ಅವರು ಈಡೇರಿಸಲಿಲ್ಲ’ ಎಂದು ಹಂಗಿಸಿದರು. ಊಟ–ಮಲಗಿದ ವಿಷಯ ಕಾವೇರಿದ ಚರ್ಚೆಗೆ ವೇದಿಕೆಯಾಯಿತು. ಕುಮಾರಸ್ವಾಮಿ ಗ್ರಾಮವಾಸ್ತವ್ಯ ಹಾಗೂ ಯಡಿಯೂರಪ್ಪ ಅವರ ಪರಿಹಾರ ಕ್ರಮದ ಬಗ್ಗೆ ವಿವರವಾಗಿ ಚರ್ಚೆ ಮಾಡೋಣ ಎಂದು ಹೇಳಿದ ಸವದಿ, ಈ ಚರ್ಚೆಗೆ ತೆರೆ ಎಳೆದರು.