<p><strong>ದಾವಣಗೆರೆ:</strong> ‘ಇದು ದರಿದ್ರ ಸರ್ಕಾರ ಎಂದು ನಾನು ಟೀಕಿಸಿದಾಗ ಬಜೆಟ್ನಲ್ಲಿ ಇದಕ್ಕೆ ಉತ್ತರ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಬಜೆಟ್ನಲ್ಲಿ ಎಲ್ಲಿದೆ ಉತ್ತರ ಮಿಸ್ಟರ್ ಯಡಿಯೂರಪ್ಪ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.</p>.<p>‘ನೀರಾವರಿ ಯೋಜನೆಗಳಿಗೆ ಅನುದಾನ ನೀಡಿಲ್ಲ. ಜನರು ಹೋರಾಟಕ್ಕೆ ಇಳಿದ ಮೇಲೆ ಕೃಷ್ಣ ಮೇಲ್ದಂಡೆ ಯೋಜನೆಗೆ ₹ 10 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಬಜೆಟ್ನಲ್ಲಿ ಎಲ್ಲಾ ಹಂಚಿ ಆಗಿದೆ. ಮತ್ತೆ ₹ 10 ಸಾವಿರ ಕೋಟಿ ಘೋಷಣೆ ಮಾಡಿದರೆ ಅದನ್ನು ಎಲ್ಲಿಂದ ತರುತ್ತಾರೆ? ಬಜೆಟ್ ಮಂಡಿಸಿದ ಒಂದೇ ದಿನದಲ್ಲಿ ಈ ರೀತಿ ಘೋಷಣೆ ಮಾಡುವುದರಿಂದ ಬಜೆಟ್ನ ಪಾವಿತ್ರ್ಯ ಹೋಗುತ್ತದೆ. ಅತ್ಯಂತ ಕೆಟ್ಟ ಪದ್ಧತಿ ಇದು’ ಎಂದು ಭಾನುವಾರ ಟೀಕಿಸಿದರು.</p>.<p>‘ಕಲ್ಯಾಣ ಕರ್ನಾಟಕದ ಪರ ಎಂದು ಹೇಳಿದರೆ ಸಾಲದು. ಕಲ್ಯಾಣ ಕರ್ನಾಟಕಕ್ಕೆ ₹ 2,500 ಕೋಟಿ ಕೇಳಿದ್ದರು. ನೀಡಿದ್ದು ₹ 1,500 ಕೋಟಿ ಮಾತ್ರ. ನಾನು 2017–18ರ ಸಾಲಿನಲ್ಲಿ ಇಷ್ಟೇ ಕೊಟ್ಟಿದ್ದೆ. ಮೂರು ವರ್ಷಗಳಲ್ಲಿ ಶೇ 5–6ರಷ್ಟು ಹಣದುಬ್ಬರ ಆಗಿರುತ್ತದೆ. ಅಷ್ಟಾದರೂ ಹೆಚ್ಚಿಸಬೇಕಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ‘ಇದು ದರಿದ್ರ ಸರ್ಕಾರ ಎಂದು ನಾನು ಟೀಕಿಸಿದಾಗ ಬಜೆಟ್ನಲ್ಲಿ ಇದಕ್ಕೆ ಉತ್ತರ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಬಜೆಟ್ನಲ್ಲಿ ಎಲ್ಲಿದೆ ಉತ್ತರ ಮಿಸ್ಟರ್ ಯಡಿಯೂರಪ್ಪ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.</p>.<p>‘ನೀರಾವರಿ ಯೋಜನೆಗಳಿಗೆ ಅನುದಾನ ನೀಡಿಲ್ಲ. ಜನರು ಹೋರಾಟಕ್ಕೆ ಇಳಿದ ಮೇಲೆ ಕೃಷ್ಣ ಮೇಲ್ದಂಡೆ ಯೋಜನೆಗೆ ₹ 10 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ. ಬಜೆಟ್ನಲ್ಲಿ ಎಲ್ಲಾ ಹಂಚಿ ಆಗಿದೆ. ಮತ್ತೆ ₹ 10 ಸಾವಿರ ಕೋಟಿ ಘೋಷಣೆ ಮಾಡಿದರೆ ಅದನ್ನು ಎಲ್ಲಿಂದ ತರುತ್ತಾರೆ? ಬಜೆಟ್ ಮಂಡಿಸಿದ ಒಂದೇ ದಿನದಲ್ಲಿ ಈ ರೀತಿ ಘೋಷಣೆ ಮಾಡುವುದರಿಂದ ಬಜೆಟ್ನ ಪಾವಿತ್ರ್ಯ ಹೋಗುತ್ತದೆ. ಅತ್ಯಂತ ಕೆಟ್ಟ ಪದ್ಧತಿ ಇದು’ ಎಂದು ಭಾನುವಾರ ಟೀಕಿಸಿದರು.</p>.<p>‘ಕಲ್ಯಾಣ ಕರ್ನಾಟಕದ ಪರ ಎಂದು ಹೇಳಿದರೆ ಸಾಲದು. ಕಲ್ಯಾಣ ಕರ್ನಾಟಕಕ್ಕೆ ₹ 2,500 ಕೋಟಿ ಕೇಳಿದ್ದರು. ನೀಡಿದ್ದು ₹ 1,500 ಕೋಟಿ ಮಾತ್ರ. ನಾನು 2017–18ರ ಸಾಲಿನಲ್ಲಿ ಇಷ್ಟೇ ಕೊಟ್ಟಿದ್ದೆ. ಮೂರು ವರ್ಷಗಳಲ್ಲಿ ಶೇ 5–6ರಷ್ಟು ಹಣದುಬ್ಬರ ಆಗಿರುತ್ತದೆ. ಅಷ್ಟಾದರೂ ಹೆಚ್ಚಿಸಬೇಕಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>