<p><strong>ಬೆಂಗಳೂರು:</strong> ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿಗೆ ಐವರು ಕಲಾವಿದರು ಹಾಗೂ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನಕ್ಕೆ 6 ಮಂದಿಯ ಶಿಲ್ಪ ಕಲಾಕೃತಿಗಳು ಆಯ್ಕೆಯಾಗಿವೆ.</p>.<p>ಗಣೇಶ ಸೀತಾರಾಮ ಆಚಾರಿ (ಸಂಪ್ರದಾಯ ಶಿಲ್ಪ, ಉತ್ತರ ಕನ್ನಡ), ಎಸ್.ಎನ್.ಸೋಮಾಚಾರ್ (ಸಂಪ್ರದಾಯ ಶಿಲ್ಪ, ಮೈಸೂರು), ಚನ್ನವೀರಸ್ವಾಮಿ ಗ.ಹಿಡ್ಕಿಮಠ (ಸಂಪ್ರದಾಯ ಶಿಲ್ಪ, ಧಾರವಾಡ), ಎಸ್.ಜಿ.ನಾಗರಾಜ್ (ಕಾಷ್ಠಶಿಲ್ಪ, ಬೆಂಗಳೂರು) ಹಾಗೂ ವಿಜಯರಾವ್ (ಸಮಕಾಲೀನ ಶಿಲ್ಪ, ಮೈಸೂರು) ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದೆ.</p>.<p>ಮೈಸೂರಿನ ರಾಮ್ಸನ್ಸ್ ಕಲಾ ಪ್ರತಿಷ್ಠಾನದ ಬಹುಮಾನಕ್ಕೆ ಮೈಸೂರು ಜಿಲ್ಲೆಯ ಮಹದೇವಾಚಾರಿ ಅವರ ಕಲ್ಲಿನ ಹೊಯ್ಸಳ ಗಣೇಶ ಕಲಾಕೃತಿ, ದಿ.ಗಂಗಾಧರ್ ಎಂ.ಬಡಿಗೇರ ಬಹುಮಾನಕ್ಕೆ ಶಿವಮೊಗ್ಗ ಜಿಲ್ಲೆಯ ಎಸ್.ಭರತ್ ಅವರ ಮರದ ಮಹಿಷಾಸುರ ಮರ್ದಿನಿ ಕಲಾ<br />ಕೃತಿ ಹಾಗೂ ಅಜ್ಜಿಹಳ್ಳಿ ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ ಸ್ಮಾರಕ ಬಹುಮಾನಕ್ಕೆ ಕಲಬುರ್ಗಿ ಜಿಲ್ಲೆಯ ಈರಣ್ಣ ಕೆ.ವಿಶ್ವಕರ್ಮ ಅವರ ಕಲ್ಲಿನ ಶ್ರೀ ಮೌನೇಶ್ವರರ ಕಲಾಕೃತಿಯು ಆಯ್ಕೆಯಾಗಿದೆ. ಮಾ.9ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2019ನೇ ಸಾಲಿನ ಗೌರವ ಪ್ರಶಸ್ತಿಗೆ ಐವರು ಕಲಾವಿದರು ಹಾಗೂ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನಕ್ಕೆ 6 ಮಂದಿಯ ಶಿಲ್ಪ ಕಲಾಕೃತಿಗಳು ಆಯ್ಕೆಯಾಗಿವೆ.</p>.<p>ಗಣೇಶ ಸೀತಾರಾಮ ಆಚಾರಿ (ಸಂಪ್ರದಾಯ ಶಿಲ್ಪ, ಉತ್ತರ ಕನ್ನಡ), ಎಸ್.ಎನ್.ಸೋಮಾಚಾರ್ (ಸಂಪ್ರದಾಯ ಶಿಲ್ಪ, ಮೈಸೂರು), ಚನ್ನವೀರಸ್ವಾಮಿ ಗ.ಹಿಡ್ಕಿಮಠ (ಸಂಪ್ರದಾಯ ಶಿಲ್ಪ, ಧಾರವಾಡ), ಎಸ್.ಜಿ.ನಾಗರಾಜ್ (ಕಾಷ್ಠಶಿಲ್ಪ, ಬೆಂಗಳೂರು) ಹಾಗೂ ವಿಜಯರಾವ್ (ಸಮಕಾಲೀನ ಶಿಲ್ಪ, ಮೈಸೂರು) ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದೆ.</p>.<p>ಮೈಸೂರಿನ ರಾಮ್ಸನ್ಸ್ ಕಲಾ ಪ್ರತಿಷ್ಠಾನದ ಬಹುಮಾನಕ್ಕೆ ಮೈಸೂರು ಜಿಲ್ಲೆಯ ಮಹದೇವಾಚಾರಿ ಅವರ ಕಲ್ಲಿನ ಹೊಯ್ಸಳ ಗಣೇಶ ಕಲಾಕೃತಿ, ದಿ.ಗಂಗಾಧರ್ ಎಂ.ಬಡಿಗೇರ ಬಹುಮಾನಕ್ಕೆ ಶಿವಮೊಗ್ಗ ಜಿಲ್ಲೆಯ ಎಸ್.ಭರತ್ ಅವರ ಮರದ ಮಹಿಷಾಸುರ ಮರ್ದಿನಿ ಕಲಾ<br />ಕೃತಿ ಹಾಗೂ ಅಜ್ಜಿಹಳ್ಳಿ ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ ಸ್ಮಾರಕ ಬಹುಮಾನಕ್ಕೆ ಕಲಬುರ್ಗಿ ಜಿಲ್ಲೆಯ ಈರಣ್ಣ ಕೆ.ವಿಶ್ವಕರ್ಮ ಅವರ ಕಲ್ಲಿನ ಶ್ರೀ ಮೌನೇಶ್ವರರ ಕಲಾಕೃತಿಯು ಆಯ್ಕೆಯಾಗಿದೆ. ಮಾ.9ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>