<figcaption>""</figcaption>.<p><em><strong>ಕೇಂದ್ರ ಸರ್ಕಾರದ ‘ಸಾಗರಮಾಲಾ’ ಯೋಜನೆಯು ಕಾರವಾರದ ಮೀನುಗಾರರ ನಿದ್ದೆ ಕೆಡಿಸಿದೆ. ಯೋಜನೆಯ ಪ್ರಕಾರ ಈಗಿರುವ ಬಂದರು ಸಾಮರ್ಥ್ಯ, ವ್ಯಾಪ್ತಿ ವಿಸ್ತರಣೆಯಾಗಲಿದ್ದು, ಬೃಹತ್ ಹಡುಗುಗಳ ಸಂಚಾರಕ್ಕೆ ಅವಕಾಶ ಸಿಗಲಿದೆ. ಆದರೆ, ಮೀನುಗಾರರ ದೋಣಿಗಳು ಸಂಚರಿಸುವ ಜಾಗದಲ್ಲೇ ಈ ಕಾಮಗಾರಿ ನಡೆಯುವುದರಿಂದ ಅವರ ನಿತ್ಯದ ಮೀನುಗಾರಿಕೆ ಉದ್ಯೋಗಕ್ಕೆ ತೊಡಕಾಗುವ ಆತಂಕವಿದೆ. ಕಾರವಾರ ಬಂದರಿನ ಎರಡನೇ ಹಂತದ ಅಭಿವೃದ್ಧಿ ಯೋಜನೆಯ ಒಳಹೊರಗು ಹೀಗಿದೆ</strong></em></p>.<p>ಕೇಂದ್ರ ಸರ್ಕಾರವು ಸಣ್ಣ ಬಂದರುಗಳ ಅಭಿವೃದ್ಧಿಗಾಗಿರೂಪಿಸಿದ‘ಸಾಗರಮಾಲಾ’ ಯೋಜನೆಗೆ ಕಾರವಾರದ ವಾಣಿಜ್ಯ ಬಂದರೂ ಆಯ್ಕೆಯಾಗಿದೆ. ಆದರೆ, ಯೋಜನೆಯ ಅಡಿಯಲ್ಲಿನ ಕಾಮಗಾರಿಯು ಈಗ ಇಲ್ಲಿ ವಿವಾದದ ಕೇಂದ್ರಬಿಂದುವಾಗಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ಟೊಂಕಕಟ್ಟಿ ನಿಂತಿವೆ. ಆದರೆ, ಮೀನುಗಾರರು, ಸ್ಥಳೀಯರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.</p>.<p>ಅಲೆ ತಡೆಗೋಡೆ ಹಾಗೂ ಜಟ್ಟಿ ವಿಸ್ತರಣೆ ಕಾಮಗಾರಿಗಳು ಯೋಜನೆಯ ಭಾಗವಾಗಿ ನಡೆಯಲಿವೆ. ಯೋಜನೆಗೆ 2017ರ ಡಿ.6ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು.</p>.<p class="Subhead"><strong>ಏನೇನು ಕಾಮಗಾರಿ</strong>:‘ಬಂದರಿನ ವಿಸ್ತರಣೆಗೆ ಈಗಾಗಲೇ ₹ 276 ಕೋಟಿ ಮಂಜೂರಾಗಿದೆ. ಇದರಲ್ಲಿ ಬಂದರಿನ ಉತ್ತರಕ್ಕೆ (ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸಮೀಪ) 1,160 ಮೀಟರ್ ಉದ್ದದ ಅಲೆ ತಡೆಗೋಡೆ ನಿರ್ಮಾಣವಾಗಲಿದೆ. ಅಂತೆಯೇ,ದಕ್ಷಿಣದ ಅಲೆ ತಡೆಗೋಡೆಯನ್ನು145 ಮೀಟರ್ ವಿಸ್ತರಿಸಲಾಗುತ್ತದೆ. ಈ ಕಾಮಗಾರಿಗಳಿಗೆ ₹ 215 ಕೋಟಿ ನಿಗದಿ ಮಾಡಲಾಗಿದೆ’ ಎಂದು ಬಂದರು ಇಲಾಖೆಯ ಕಾರ್ಯನಿರ್ವಾಹಕಎಂಜಿನಿಯರ್ ಟಿ.ಎಸ್.ರಾಠೋಡ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>‘ಯೋಜನೆಯ ಭಾಗವಾಗಿ ಮೊದಲು₹ 125 ಕೋಟಿಯಲ್ಲಿ 880 ಮೀಟರ್ ಅಲೆ ತಡೆಗೋಡೆ ನಿರ್ಮಾಣದ ಕೆಲಸ ಶುರು ಮಾಡಲಾಗಿದೆ. ಅದರ ಮುಂದುವರಿದ ಕಾಮಗಾರಿ ನಂತರ ನಡೆಯಲಿದೆ’ ಎಂದು ಮಾಹಿತಿ ನೀಡಿದರು.</p>.<p>ಅಲೆ ತಡೆಗೋಡೆ ನಿರ್ಮಾಣದ ಗುತ್ತಿಗೆಯನ್ನು ಮುಂಬೈನಡಿ.ವಿ.ಪಿ ಇನ್ಫ್ರಾ ಪ್ರೊಜೆಕ್ಟ್ಸ್ ಸಂಸ್ಥೆಯು ₹ 109.65 ಕೋಟಿಗೆ ಪಡೆದುಕೊಂಡಿದೆ. ಇದಕ್ಕೆ 2019ರ ಮಾರ್ಚ್ 8ರಂದು ಕಾರ್ಯಾದೇಶ ನೀಡಲಾಗಿದೆ. ಜೆಟ್ಟಿ ವಿಸ್ತರಣೆ ಕಾಮಗಾರಿಗೆ ಅಂದಾಜು ₹ 61 ಕೋಟಿ ವೆಚ್ಚವಾಗಲಿದ್ದು,ಗುತ್ತಿಗೆಯನ್ನುಚೆನ್ನೈನ ಎಂ.ಜೆ.ಕನ್ಸ್ಟ್ರಕ್ಷನ್ಸ್ ಪಡೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ಕಾರ್ಯಾದೇಶ ಬರಬೇಕಿದೆ. ಈ ಎರಡೂ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಂದರು ಇಲಾಖೆಯು ಮೂರು ವರ್ಷಗಳಗಡುವು ವಿಧಿಸಿದೆ.</p>.<p>****</p>.<p><strong>* ಬರ್ತ್ 1:</strong> ಕಾರವಾರದ ವಾಣಿಜ್ಯ ಬಂದರಿನಲ್ಲಿ ಸದ್ಯ ಕಾರ್ಯ ನಿರ್ವಹಣೆಯಲ್ಲಿದೆ.ಇಲ್ಲಿ ಏಕಕಾಲಕ್ಕೆ ಮೂರು ಚಿಕ್ಕ ಹಡುಗುಗಳು ನಿಲ್ಲಬಹುದು</p>.<p><strong>* ಬರ್ತ್ 2: </strong>ನಿರ್ಮಾಣದ ಕಾಮಗಾರಿ ಈಗ ಶುರುವಾಗಿದೆ. ಭವಿಷ್ಯದಲ್ಲಿ ಇಂತಹ ಐದು ಬರ್ತ್ಗಳನ್ನು ನಿರ್ಮಿಸುವ ಉದ್ದೇಶವಿದೆ</p>.<p><strong>* ತಡೆಗೋಡೆ:</strong> 1,160 ಮೀಟರ್ ಉದ್ದ ಅಲೆ ತಡೆಗೋಡೆ ನಿರ್ಮಾಣ;ಈಗಾಗಲೇ ಇರುವ ತಡೆಗೋಡೆ 145 ಮೀಟರ್ ವಿಸ್ತರಣೆ</p>.<p><strong>* ದಾಸ್ತಾನು ಘಟಕ:</strong> ಕಬ್ಬಿಣದ ಅದಿರು, ಕಲ್ಲಿದ್ದಲು, ಸಕ್ಕರೆ, ಸಿಮೆಂಟ್ ಮೊದಲಾದ ಸರಕು ಸಂಗ್ರಹಕ್ಕೆ ಬರ್ತ್ ಹಿಂಭಾಗದಲ್ಲಿ ದಾಸ್ತಾನು ಘಟಕ ನಿರ್ಮಾಣ</p>.<p><strong>* ದಟ್ಟಣೆ ನಿರ್ವಹಣೆ</strong>: ಸುರಕ್ಷಿತ ಪಥದರ್ಶಕ ಮತ್ತು ಪರಿಣಾಮಕಾರಿ ಸಂಚಾರ ನಿರ್ವಹಣೆಗೆವೆಸೆಲ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ವಿಟಿಎಂಎಸ್) ಅಳವಡಿಕೆ</p>.<p><strong>* ಬೃಹತ್ ಹಡಗು</strong>: ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ಪರ್ಮನೆಂಟ್ ಅಸೋಸಿಯೇಷನ್ ನ್ಯಾವಿಗೇಷನ್ ಕಾಂಗ್ರೆಸ್ (ಪಿಐಎಎನ್ಸಿ) ಮಾನದಂಡ ಆಧರಿಸಿ ವಿನ್ಯಾಸ ಮಾಡಿರುವ ಹಡಗುಗಳು ಬಂದರಿನಲ್ಲಿ ಲಂಗರು ಹಾಕಲು ವ್ಯವಸ್ಥೆ</p>.<p><strong>* ಆಮದು–ರಫ್ತು</strong>:ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್, ಸಕ್ಕರೆ, ಅಲ್ಯುಮೀನಿಯಂ, ಆಹಾರ ಧಾನ್ಯ, ಗ್ರಾನೈಟ್, ಕಲ್ಲಿದ್ದಲು, ಸಿಮೆಂಟ್, ರಸಗೊಬ್ಬರ, ಬಿಟುಮಿನ್ ಮೊದಲಾದ ಸರಕು ಇಲ್ಲಿ ಆಮದು–ರಫ್ತು ಆಗುತ್ತಿದ್ದು, ಇವುಗಳ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ</p>.<p>******</p>.<p><strong>ರೈಲ್ವೆ ಸಂಪರ್ಕ ಅಭಿವೃದ್ಧಿ</strong></p>.<p>ರಫ್ತಾಗುವ ಕಬ್ಬಿಣದ ಅದಿರು ಮತ್ತು ಅಮದಾಗುವ ಕಲ್ಲಿದ್ದಲು ಸೇರಿದಂತೆ ಇನ್ನುಮುಂದೆ ಬೃಹತ್ ಪ್ರಮಾಣದ ಸರಕು ಇಲ್ಲಿಂದ ನಿರ್ವಹಣೆ ಆಗಲಿದೆ. ಇದಕ್ಕಾಗಿ ಕೊಂಕಣ ರೈಲ್ವೆ ಸಜ್ಜಾಗಿದೆ. ಎರಡು ಲೇನ್ಗಳ ಮಾರ್ಗವನ್ನು ಬಂದರಿಗಾಗಿ ಮೀಸಲಿಡುವ ಯೋಜನೆ ಇದೆ</p>.<p><strong>ಹೆದ್ದಾರಿ ಅಭಿವೃದ್ಧಿ</strong></p>.<p>ಬಂದರು ವಿಸ್ತರಣೆಯಿಂದ ಹೆಚ್ಚುವರಿ ಸರಕು ಸಾಗಿಸಲು ಹೆದ್ದಾರಿ ಇಲಾಖೆ ಯೋಜನೆ ಹಾಕಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 66ನ್ನು ಮರುಹೊಂದಾಣಿಕೆ ಮಾಡಿ, ಸಂಚಾರ ದಟ್ಟಣೆ ನಿವಾರಣೆಗೆ ಮಾರ್ಗದಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗುವುದು.</p>.<p><strong>ಪ್ರಯೋಜನವೇನು?</strong></p>.<p>ಕಾರವಾರದ ವಾಣಿಜ್ಯ ಬಂದರುಎರಡು ಬೆಟ್ಟಗಳ ನಡುವೆ ನೈಸರ್ಗಿಕವಾಗಿ ನಿರ್ಮಾಣವಾದಕಾಲುವೆಯ ಬದಿಯಲ್ಲಿದೆ. ಇಲ್ಲಿ ಈಗ ಬೃಹತ್ ಗಾತ್ರದ ಹಡಗುಗಳು ಬರಲು ಸ್ಥಳದ ಕೊರತೆಯಿದೆ. ಅಲ್ಲದೇ ಇಲ್ಲಿ ಆಳವೂ ಕಡಿಮೆ. ಕಳೆದ ಎರಡು ವರ್ಷಗಳಲ್ಲಿ₹ 33 ಕೋಟಿ ವೆಚ್ಚ ಮಾಡಿಬಂದರಿನ ಸುತ್ತಮುತ್ತ ಸಮುದ್ರದಿಂದ ಹೂಳು ತೆಗೆಯಲಾಗಿದೆ. ಹಾಗಾಗಿ ಸರಾಸರಿ 8.5 ಮೀಟರ್ ಆಳವಿದೆ. ಯೋಜನೆ ಪೂರ್ಣಗೊಂಡಾಗ ಈ ಪ್ರದೇಶದ ಆಳ 14 ಮೀಟರ್ ಆಗಲಿದೆ.</p>.<p>ಈಗ ಮಂಜೂರಾಗಿರುವ ಕಾಮಗಾರಿ ಪೂರ್ಣಗೊಂಡ ಬಳಿಕ200ಮೀಟರ್ನಒಂದು ಬೃಹತ್ ಹಡಗನ್ನು ಲಂಗರು ಹಾಕಬಹುದಾಗಿದೆ. 130 ಮೀಟರ್ನ ಎರಡು ಹಡಗುಗಳನ್ನು ಏಕಕಾಲದಲ್ಲಿನಿಲ್ಲಿಸಬಹುದು ಎನ್ನುತ್ತಾರೆಬಂದರು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಎಸ್.ರಾಠೋಡ್.</p>.<p><strong>ಸರ್ಕಾರದ ವಾದವೇನು?</strong></p>.<p>* ಒಟ್ಟು 510 ಮೀಟರ್ ಉದ್ದದ ಜೆಟ್ಟಿ ನಿರ್ಮಾಣದಿಂದ ಮೂರು ಹಡಗು ಏಕಕಾಲದಲ್ಲಿ ಲಂಗರು ಹಾಕಬಹುದು</p>.<p>* 14 ಮೀಟರ್ ಹೂಳೆತ್ತಲು ಅವಕಾಶ ನೀಡಲಾಗಿದ್ದು, ಬೃಹತ್ ಹಡಗುಗಳ ಸಂಚಾರಕ್ಕೆ ಅನುಕೂಲವಾಗಲಿದೆ</p>.<p>* ಕಾರವಾರ ಸುತ್ತಮುತ್ತ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿವಿಧ ಉದ್ಯೋಗಾವಕಾಶಗಳು ಹೆಚ್ಚಲಿವೆ</p>.<p>* ಮೀನುಗಾರಿಕಾ ದೋಣಿಗಳಿಗೂ ರಕ್ಷಣೆ ಸಿಕ್ಕಿ, ಮತ್ಸ್ಯೋದ್ಯಮಕ್ಕೆ ಮತ್ತಷ್ಟು ಸಹಕಾರಿಯಾಗಲಿದೆ</p>.<p>––––––––</p>.<p>ಮೀನುಗಾರರ ಆತಂಕವೇನು?</p>.<p>* ಮೀನುಗಾರರ ಪ್ರಮುಖ ತಾಣವಾದ ಅಲಿಗದ್ದಾವನ್ನು<br />ಮುಚ್ಚಿದಾಗ ಮೀನುಗಾರಿಕೆಗೆ ಬಹಳ ತೊಂದರೆಆಗಬಹುದು</p>.<p>* ಭವಿಷ್ಯದಲ್ಲಿ ಬೈತಖೋಲ್ನಮೀನುಗಾರಿಕಾ ಬಂದರಿಗೆ ಮೀನುಗಾರರ ದೋಣಿಗಳು ಹೋಗಲುಸ್ಥಳ ದೊರೆಯದೇ ಇರಬಹುದು</p>.<p>* ಬಂದರು ನಗರಕ್ಕೆ ಹೊಂದಿಕೊಂಡಿದ್ದು,ಅದಿರು ಸಾಗಣೆಯಂತಹ ಚಟುವಟಿಕೆಗಳುಆರೋಗ್ಯ ಸಮಸ್ಯೆ ತರಬಹುದು</p>.<p>* ಬೃಹತ್ ಅಲೆ ತಡೆಗೋಡೆ ನಿರ್ಮಾಣದಿಂದ ಕಡಲತೀರದ ಮತ್ತೊಂದು ಭಾಗದಲ್ಲಿ ಕೊರೆತ ಆಗಲಿದೆ</p>.<p>* ಬಂದರು ವಿಸ್ತರಣೆಯಿಂದ ಕಡಲತೀರದ ಮೇಲೆ ಒತ್ತಡ ಹೆಚ್ಚಲಿದ್ದು, ವಾಯುವಿಹಾರಕ್ಕೆ ಅವಕಾಶವಿರದು</p>.<p>* ಕೋಣೆನಾಲಾ (ಮುಖ್ಯ ಚರಂಡಿ) ಸಮುದ್ರ ಸೇರುವ ಸ್ಥಳವನ್ನು ಮುಚ್ಚುವುದರಿಂದ ನಗರದಲ್ಲಿ ಆರೋಗ್ಯ ಸಮಸ್ಯೆ ಆಗಬಹುದು</p>.<p>* ಬಂದರಿಗೆ ನಗರದ ಮೂಲಕವೇ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಮತ್ತಷ್ಟು ಜನರು ನೆಲೆ ಕಳೆದುಕೊಳ್ಳಬಹುದು</p>.<p>*****</p>.<p><strong>ದಾಸ್ತಾನು ಘಟಕ</strong>: ಸರಕು ಸಂಗ್ರಹಕ್ಕೆ ಬರ್ತ್ ಹಿಂಭಾಗದಲ್ಲಿ ಗೋದಾಮು, ಸಾರಿಗೆ ಶೆಡ್, ಶೀತಲೀಕರಣ ಘಟಕ, ಕಂಟೇನರ್ ಸೌಲಭ್ಯ, ಸಿಬ್ಬಂದಿ ವಸತಿಗೃಹ ಅಭಿವೃದ್ಧಿ ಪ್ರಸ್ತಾವ</p>.<p><strong>ಆಮದು–ರಫ್ತು</strong>: ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್, ಸಕ್ಕರೆ, ಅಲ್ಯುಮೀನಿಯಂ, ಆಹಾರ ಧಾನ್ಯ, ಗ್ರಾನೈಟ್, ಕಲ್ಲಿದ್ದಲು, ಸಿಮೆಂಟ್, ರಸಗೊಬ್ಬರ, ಬಿಟುಮಿನ್ ಮೊದಲಾದ ಸರಕು ಇಲ್ಲಿ ಆಮದು–ರಫ್ತು ಆಗುತ್ತಿದ್ದು, ಇವುಗಳುಭಾರಿ ಪ್ರಮಾಣದಲ್ಲಿ ಹೆಚ್ಚಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><em><strong>ಕೇಂದ್ರ ಸರ್ಕಾರದ ‘ಸಾಗರಮಾಲಾ’ ಯೋಜನೆಯು ಕಾರವಾರದ ಮೀನುಗಾರರ ನಿದ್ದೆ ಕೆಡಿಸಿದೆ. ಯೋಜನೆಯ ಪ್ರಕಾರ ಈಗಿರುವ ಬಂದರು ಸಾಮರ್ಥ್ಯ, ವ್ಯಾಪ್ತಿ ವಿಸ್ತರಣೆಯಾಗಲಿದ್ದು, ಬೃಹತ್ ಹಡುಗುಗಳ ಸಂಚಾರಕ್ಕೆ ಅವಕಾಶ ಸಿಗಲಿದೆ. ಆದರೆ, ಮೀನುಗಾರರ ದೋಣಿಗಳು ಸಂಚರಿಸುವ ಜಾಗದಲ್ಲೇ ಈ ಕಾಮಗಾರಿ ನಡೆಯುವುದರಿಂದ ಅವರ ನಿತ್ಯದ ಮೀನುಗಾರಿಕೆ ಉದ್ಯೋಗಕ್ಕೆ ತೊಡಕಾಗುವ ಆತಂಕವಿದೆ. ಕಾರವಾರ ಬಂದರಿನ ಎರಡನೇ ಹಂತದ ಅಭಿವೃದ್ಧಿ ಯೋಜನೆಯ ಒಳಹೊರಗು ಹೀಗಿದೆ</strong></em></p>.<p>ಕೇಂದ್ರ ಸರ್ಕಾರವು ಸಣ್ಣ ಬಂದರುಗಳ ಅಭಿವೃದ್ಧಿಗಾಗಿರೂಪಿಸಿದ‘ಸಾಗರಮಾಲಾ’ ಯೋಜನೆಗೆ ಕಾರವಾರದ ವಾಣಿಜ್ಯ ಬಂದರೂ ಆಯ್ಕೆಯಾಗಿದೆ. ಆದರೆ, ಯೋಜನೆಯ ಅಡಿಯಲ್ಲಿನ ಕಾಮಗಾರಿಯು ಈಗ ಇಲ್ಲಿ ವಿವಾದದ ಕೇಂದ್ರಬಿಂದುವಾಗಿದೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ಟೊಂಕಕಟ್ಟಿ ನಿಂತಿವೆ. ಆದರೆ, ಮೀನುಗಾರರು, ಸ್ಥಳೀಯರು ತೀವ್ರವಾಗಿ ವಿರೋಧಿಸುತ್ತಿದ್ದಾರೆ.</p>.<p>ಅಲೆ ತಡೆಗೋಡೆ ಹಾಗೂ ಜಟ್ಟಿ ವಿಸ್ತರಣೆ ಕಾಮಗಾರಿಗಳು ಯೋಜನೆಯ ಭಾಗವಾಗಿ ನಡೆಯಲಿವೆ. ಯೋಜನೆಗೆ 2017ರ ಡಿ.6ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು.</p>.<p class="Subhead"><strong>ಏನೇನು ಕಾಮಗಾರಿ</strong>:‘ಬಂದರಿನ ವಿಸ್ತರಣೆಗೆ ಈಗಾಗಲೇ ₹ 276 ಕೋಟಿ ಮಂಜೂರಾಗಿದೆ. ಇದರಲ್ಲಿ ಬಂದರಿನ ಉತ್ತರಕ್ಕೆ (ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸಮೀಪ) 1,160 ಮೀಟರ್ ಉದ್ದದ ಅಲೆ ತಡೆಗೋಡೆ ನಿರ್ಮಾಣವಾಗಲಿದೆ. ಅಂತೆಯೇ,ದಕ್ಷಿಣದ ಅಲೆ ತಡೆಗೋಡೆಯನ್ನು145 ಮೀಟರ್ ವಿಸ್ತರಿಸಲಾಗುತ್ತದೆ. ಈ ಕಾಮಗಾರಿಗಳಿಗೆ ₹ 215 ಕೋಟಿ ನಿಗದಿ ಮಾಡಲಾಗಿದೆ’ ಎಂದು ಬಂದರು ಇಲಾಖೆಯ ಕಾರ್ಯನಿರ್ವಾಹಕಎಂಜಿನಿಯರ್ ಟಿ.ಎಸ್.ರಾಠೋಡ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>‘ಯೋಜನೆಯ ಭಾಗವಾಗಿ ಮೊದಲು₹ 125 ಕೋಟಿಯಲ್ಲಿ 880 ಮೀಟರ್ ಅಲೆ ತಡೆಗೋಡೆ ನಿರ್ಮಾಣದ ಕೆಲಸ ಶುರು ಮಾಡಲಾಗಿದೆ. ಅದರ ಮುಂದುವರಿದ ಕಾಮಗಾರಿ ನಂತರ ನಡೆಯಲಿದೆ’ ಎಂದು ಮಾಹಿತಿ ನೀಡಿದರು.</p>.<p>ಅಲೆ ತಡೆಗೋಡೆ ನಿರ್ಮಾಣದ ಗುತ್ತಿಗೆಯನ್ನು ಮುಂಬೈನಡಿ.ವಿ.ಪಿ ಇನ್ಫ್ರಾ ಪ್ರೊಜೆಕ್ಟ್ಸ್ ಸಂಸ್ಥೆಯು ₹ 109.65 ಕೋಟಿಗೆ ಪಡೆದುಕೊಂಡಿದೆ. ಇದಕ್ಕೆ 2019ರ ಮಾರ್ಚ್ 8ರಂದು ಕಾರ್ಯಾದೇಶ ನೀಡಲಾಗಿದೆ. ಜೆಟ್ಟಿ ವಿಸ್ತರಣೆ ಕಾಮಗಾರಿಗೆ ಅಂದಾಜು ₹ 61 ಕೋಟಿ ವೆಚ್ಚವಾಗಲಿದ್ದು,ಗುತ್ತಿಗೆಯನ್ನುಚೆನ್ನೈನ ಎಂ.ಜೆ.ಕನ್ಸ್ಟ್ರಕ್ಷನ್ಸ್ ಪಡೆದುಕೊಂಡಿದೆ. ಇದಕ್ಕೆ ಸಂಬಂಧಿಸಿ ಕಾರ್ಯಾದೇಶ ಬರಬೇಕಿದೆ. ಈ ಎರಡೂ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬಂದರು ಇಲಾಖೆಯು ಮೂರು ವರ್ಷಗಳಗಡುವು ವಿಧಿಸಿದೆ.</p>.<p>****</p>.<p><strong>* ಬರ್ತ್ 1:</strong> ಕಾರವಾರದ ವಾಣಿಜ್ಯ ಬಂದರಿನಲ್ಲಿ ಸದ್ಯ ಕಾರ್ಯ ನಿರ್ವಹಣೆಯಲ್ಲಿದೆ.ಇಲ್ಲಿ ಏಕಕಾಲಕ್ಕೆ ಮೂರು ಚಿಕ್ಕ ಹಡುಗುಗಳು ನಿಲ್ಲಬಹುದು</p>.<p><strong>* ಬರ್ತ್ 2: </strong>ನಿರ್ಮಾಣದ ಕಾಮಗಾರಿ ಈಗ ಶುರುವಾಗಿದೆ. ಭವಿಷ್ಯದಲ್ಲಿ ಇಂತಹ ಐದು ಬರ್ತ್ಗಳನ್ನು ನಿರ್ಮಿಸುವ ಉದ್ದೇಶವಿದೆ</p>.<p><strong>* ತಡೆಗೋಡೆ:</strong> 1,160 ಮೀಟರ್ ಉದ್ದ ಅಲೆ ತಡೆಗೋಡೆ ನಿರ್ಮಾಣ;ಈಗಾಗಲೇ ಇರುವ ತಡೆಗೋಡೆ 145 ಮೀಟರ್ ವಿಸ್ತರಣೆ</p>.<p><strong>* ದಾಸ್ತಾನು ಘಟಕ:</strong> ಕಬ್ಬಿಣದ ಅದಿರು, ಕಲ್ಲಿದ್ದಲು, ಸಕ್ಕರೆ, ಸಿಮೆಂಟ್ ಮೊದಲಾದ ಸರಕು ಸಂಗ್ರಹಕ್ಕೆ ಬರ್ತ್ ಹಿಂಭಾಗದಲ್ಲಿ ದಾಸ್ತಾನು ಘಟಕ ನಿರ್ಮಾಣ</p>.<p><strong>* ದಟ್ಟಣೆ ನಿರ್ವಹಣೆ</strong>: ಸುರಕ್ಷಿತ ಪಥದರ್ಶಕ ಮತ್ತು ಪರಿಣಾಮಕಾರಿ ಸಂಚಾರ ನಿರ್ವಹಣೆಗೆವೆಸೆಲ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ವಿಟಿಎಂಎಸ್) ಅಳವಡಿಕೆ</p>.<p><strong>* ಬೃಹತ್ ಹಡಗು</strong>: ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ಪರ್ಮನೆಂಟ್ ಅಸೋಸಿಯೇಷನ್ ನ್ಯಾವಿಗೇಷನ್ ಕಾಂಗ್ರೆಸ್ (ಪಿಐಎಎನ್ಸಿ) ಮಾನದಂಡ ಆಧರಿಸಿ ವಿನ್ಯಾಸ ಮಾಡಿರುವ ಹಡಗುಗಳು ಬಂದರಿನಲ್ಲಿ ಲಂಗರು ಹಾಕಲು ವ್ಯವಸ್ಥೆ</p>.<p><strong>* ಆಮದು–ರಫ್ತು</strong>:ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್, ಸಕ್ಕರೆ, ಅಲ್ಯುಮೀನಿಯಂ, ಆಹಾರ ಧಾನ್ಯ, ಗ್ರಾನೈಟ್, ಕಲ್ಲಿದ್ದಲು, ಸಿಮೆಂಟ್, ರಸಗೊಬ್ಬರ, ಬಿಟುಮಿನ್ ಮೊದಲಾದ ಸರಕು ಇಲ್ಲಿ ಆಮದು–ರಫ್ತು ಆಗುತ್ತಿದ್ದು, ಇವುಗಳ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಲಿದೆ</p>.<p>******</p>.<p><strong>ರೈಲ್ವೆ ಸಂಪರ್ಕ ಅಭಿವೃದ್ಧಿ</strong></p>.<p>ರಫ್ತಾಗುವ ಕಬ್ಬಿಣದ ಅದಿರು ಮತ್ತು ಅಮದಾಗುವ ಕಲ್ಲಿದ್ದಲು ಸೇರಿದಂತೆ ಇನ್ನುಮುಂದೆ ಬೃಹತ್ ಪ್ರಮಾಣದ ಸರಕು ಇಲ್ಲಿಂದ ನಿರ್ವಹಣೆ ಆಗಲಿದೆ. ಇದಕ್ಕಾಗಿ ಕೊಂಕಣ ರೈಲ್ವೆ ಸಜ್ಜಾಗಿದೆ. ಎರಡು ಲೇನ್ಗಳ ಮಾರ್ಗವನ್ನು ಬಂದರಿಗಾಗಿ ಮೀಸಲಿಡುವ ಯೋಜನೆ ಇದೆ</p>.<p><strong>ಹೆದ್ದಾರಿ ಅಭಿವೃದ್ಧಿ</strong></p>.<p>ಬಂದರು ವಿಸ್ತರಣೆಯಿಂದ ಹೆಚ್ಚುವರಿ ಸರಕು ಸಾಗಿಸಲು ಹೆದ್ದಾರಿ ಇಲಾಖೆ ಯೋಜನೆ ಹಾಕಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 66ನ್ನು ಮರುಹೊಂದಾಣಿಕೆ ಮಾಡಿ, ಸಂಚಾರ ದಟ್ಟಣೆ ನಿವಾರಣೆಗೆ ಮಾರ್ಗದಲ್ಲಿ ಒಂದಿಷ್ಟು ಬದಲಾವಣೆ ಮಾಡಲಾಗುವುದು.</p>.<p><strong>ಪ್ರಯೋಜನವೇನು?</strong></p>.<p>ಕಾರವಾರದ ವಾಣಿಜ್ಯ ಬಂದರುಎರಡು ಬೆಟ್ಟಗಳ ನಡುವೆ ನೈಸರ್ಗಿಕವಾಗಿ ನಿರ್ಮಾಣವಾದಕಾಲುವೆಯ ಬದಿಯಲ್ಲಿದೆ. ಇಲ್ಲಿ ಈಗ ಬೃಹತ್ ಗಾತ್ರದ ಹಡಗುಗಳು ಬರಲು ಸ್ಥಳದ ಕೊರತೆಯಿದೆ. ಅಲ್ಲದೇ ಇಲ್ಲಿ ಆಳವೂ ಕಡಿಮೆ. ಕಳೆದ ಎರಡು ವರ್ಷಗಳಲ್ಲಿ₹ 33 ಕೋಟಿ ವೆಚ್ಚ ಮಾಡಿಬಂದರಿನ ಸುತ್ತಮುತ್ತ ಸಮುದ್ರದಿಂದ ಹೂಳು ತೆಗೆಯಲಾಗಿದೆ. ಹಾಗಾಗಿ ಸರಾಸರಿ 8.5 ಮೀಟರ್ ಆಳವಿದೆ. ಯೋಜನೆ ಪೂರ್ಣಗೊಂಡಾಗ ಈ ಪ್ರದೇಶದ ಆಳ 14 ಮೀಟರ್ ಆಗಲಿದೆ.</p>.<p>ಈಗ ಮಂಜೂರಾಗಿರುವ ಕಾಮಗಾರಿ ಪೂರ್ಣಗೊಂಡ ಬಳಿಕ200ಮೀಟರ್ನಒಂದು ಬೃಹತ್ ಹಡಗನ್ನು ಲಂಗರು ಹಾಕಬಹುದಾಗಿದೆ. 130 ಮೀಟರ್ನ ಎರಡು ಹಡಗುಗಳನ್ನು ಏಕಕಾಲದಲ್ಲಿನಿಲ್ಲಿಸಬಹುದು ಎನ್ನುತ್ತಾರೆಬಂದರು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಎಸ್.ರಾಠೋಡ್.</p>.<p><strong>ಸರ್ಕಾರದ ವಾದವೇನು?</strong></p>.<p>* ಒಟ್ಟು 510 ಮೀಟರ್ ಉದ್ದದ ಜೆಟ್ಟಿ ನಿರ್ಮಾಣದಿಂದ ಮೂರು ಹಡಗು ಏಕಕಾಲದಲ್ಲಿ ಲಂಗರು ಹಾಕಬಹುದು</p>.<p>* 14 ಮೀಟರ್ ಹೂಳೆತ್ತಲು ಅವಕಾಶ ನೀಡಲಾಗಿದ್ದು, ಬೃಹತ್ ಹಡಗುಗಳ ಸಂಚಾರಕ್ಕೆ ಅನುಕೂಲವಾಗಲಿದೆ</p>.<p>* ಕಾರವಾರ ಸುತ್ತಮುತ್ತ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿವಿಧ ಉದ್ಯೋಗಾವಕಾಶಗಳು ಹೆಚ್ಚಲಿವೆ</p>.<p>* ಮೀನುಗಾರಿಕಾ ದೋಣಿಗಳಿಗೂ ರಕ್ಷಣೆ ಸಿಕ್ಕಿ, ಮತ್ಸ್ಯೋದ್ಯಮಕ್ಕೆ ಮತ್ತಷ್ಟು ಸಹಕಾರಿಯಾಗಲಿದೆ</p>.<p>––––––––</p>.<p>ಮೀನುಗಾರರ ಆತಂಕವೇನು?</p>.<p>* ಮೀನುಗಾರರ ಪ್ರಮುಖ ತಾಣವಾದ ಅಲಿಗದ್ದಾವನ್ನು<br />ಮುಚ್ಚಿದಾಗ ಮೀನುಗಾರಿಕೆಗೆ ಬಹಳ ತೊಂದರೆಆಗಬಹುದು</p>.<p>* ಭವಿಷ್ಯದಲ್ಲಿ ಬೈತಖೋಲ್ನಮೀನುಗಾರಿಕಾ ಬಂದರಿಗೆ ಮೀನುಗಾರರ ದೋಣಿಗಳು ಹೋಗಲುಸ್ಥಳ ದೊರೆಯದೇ ಇರಬಹುದು</p>.<p>* ಬಂದರು ನಗರಕ್ಕೆ ಹೊಂದಿಕೊಂಡಿದ್ದು,ಅದಿರು ಸಾಗಣೆಯಂತಹ ಚಟುವಟಿಕೆಗಳುಆರೋಗ್ಯ ಸಮಸ್ಯೆ ತರಬಹುದು</p>.<p>* ಬೃಹತ್ ಅಲೆ ತಡೆಗೋಡೆ ನಿರ್ಮಾಣದಿಂದ ಕಡಲತೀರದ ಮತ್ತೊಂದು ಭಾಗದಲ್ಲಿ ಕೊರೆತ ಆಗಲಿದೆ</p>.<p>* ಬಂದರು ವಿಸ್ತರಣೆಯಿಂದ ಕಡಲತೀರದ ಮೇಲೆ ಒತ್ತಡ ಹೆಚ್ಚಲಿದ್ದು, ವಾಯುವಿಹಾರಕ್ಕೆ ಅವಕಾಶವಿರದು</p>.<p>* ಕೋಣೆನಾಲಾ (ಮುಖ್ಯ ಚರಂಡಿ) ಸಮುದ್ರ ಸೇರುವ ಸ್ಥಳವನ್ನು ಮುಚ್ಚುವುದರಿಂದ ನಗರದಲ್ಲಿ ಆರೋಗ್ಯ ಸಮಸ್ಯೆ ಆಗಬಹುದು</p>.<p>* ಬಂದರಿಗೆ ನಗರದ ಮೂಲಕವೇ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಮತ್ತಷ್ಟು ಜನರು ನೆಲೆ ಕಳೆದುಕೊಳ್ಳಬಹುದು</p>.<p>*****</p>.<p><strong>ದಾಸ್ತಾನು ಘಟಕ</strong>: ಸರಕು ಸಂಗ್ರಹಕ್ಕೆ ಬರ್ತ್ ಹಿಂಭಾಗದಲ್ಲಿ ಗೋದಾಮು, ಸಾರಿಗೆ ಶೆಡ್, ಶೀತಲೀಕರಣ ಘಟಕ, ಕಂಟೇನರ್ ಸೌಲಭ್ಯ, ಸಿಬ್ಬಂದಿ ವಸತಿಗೃಹ ಅಭಿವೃದ್ಧಿ ಪ್ರಸ್ತಾವ</p>.<p><strong>ಆಮದು–ರಫ್ತು</strong>: ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಬಾಕ್ಸೈಟ್, ಸಕ್ಕರೆ, ಅಲ್ಯುಮೀನಿಯಂ, ಆಹಾರ ಧಾನ್ಯ, ಗ್ರಾನೈಟ್, ಕಲ್ಲಿದ್ದಲು, ಸಿಮೆಂಟ್, ರಸಗೊಬ್ಬರ, ಬಿಟುಮಿನ್ ಮೊದಲಾದ ಸರಕು ಇಲ್ಲಿ ಆಮದು–ರಫ್ತು ಆಗುತ್ತಿದ್ದು, ಇವುಗಳುಭಾರಿ ಪ್ರಮಾಣದಲ್ಲಿ ಹೆಚ್ಚಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>