ಮೃತರೆಲ್ಲರೂ ಬೆಂಗಳೂರಿನಿಂದ ತಮ್ಮ ಸ್ವಗ್ರಾಮಕ್ಕೆ ಹೊರಟಿದ್ದು, ಭಾನುವಾರ ಬೆಳಗಿನ ಜಾವ ಕಾನಹೊಸಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಮೇಲ್ಸೇತುವೆ ಮೇಲೆ ಬರುವಾಗ ಚಾಲಕ ಅಜಾಗರೂಕತೆ ಹಾಗೂ ಅತಿವೇಗದಿಂದ ಕಾರು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಮತ್ತೊಂದು ರಸ್ತೆಗೆ ಹೋಗಿದ್ದು, ಎದುರಿಗೆ ಬರುತ್ತಿದ್ದ ಕಂಟೇನರ್ ಲಾರಿಗೆ ಡಿಕ್ಕಿಯಾಗಿದೆ. ಇದರಿಂದ ಕಾರಿನಲ್ಲಿದ್ದ ಮೂರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪಿಎಸ್ಐ ಎಚ್. ನಾಗರಾಜ ತಿಳಿಸಿದ್ದು, ಮೃತರ ಸಂಬಂಧಿಕರು ಬಂದ ನಂತರ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು ಎಂದಿದ್ದಾರೆ.