‘ಕನ್ನಡದ ಮಣ್ಣಿನಲ್ಲಿ ಬಹುತ್ವಕ್ಕೆ ಉದಾಹರಣೆ ಎನ್ನುವಂತೆ ಎಲ್ಲರೂ ಸೌಹಾರ್ದದಿಂದ ಬದುಕುತ್ತಿದ್ದೇವೆ. ಯಾವುದೇ ವ್ಯಕ್ತಿ ಅಥವಾ ಸಮುದಾಯ ಸ್ಥಳೀಯರ ಜೊತೆಗೆ ಹೊಂದಿಕೊಂಡು ಸೌಹಾರ್ದದಿಂದ ಬದುಕು ನಡೆಸಿದಾಗ ಶಾಂತಿ, ಸಹನೆ, ನೆಮ್ಮದಿ ನೆಲೆಗೊಳ್ಳಲು ಸಾಧ್ಯ. ಕ್ರೈಸ್ತರು ಈ ತತ್ವ ಅನುಸರಿಸುತ್ತಿರುವುದು ಶ್ಲಾಘನೀಯ’ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.