ಬೆಂಗಳೂರು: ಲಾಕ್ಡೌನ್ನಿಂದಾಗಿ ಎರಡು ತಿಂಗಳಿನಿಂದ ದೆಹಲಿಯಲ್ಲಿಯೇ ಸಿಲುಕಿದ್ದ 5 ವರ್ಷದ ಬಾಲಕನೊಬ್ಬ ದೆಹಲಿಯಿಂದ ವಿಮಾನದಲ್ಲಿ ಒಂಟಿಯಾಗಿ ಪ್ರಯಾಣಿಸಿ ಸೋಮವಾರ ಬೆಂಗಳೂರು ತಲುಪಿದ್ದಾನೆ.
ದೇಶದಲ್ಲಿ ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಯಲು ವಿಮಾನ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಆದರೆ, ಮೂರು ತಿಂಗಳ ಹಿಂದೆ ದೆಹಲಿಗೆ ತೆರಳಿದ್ದ ಐದು ವರ್ಷದ ವಿಹಾನ್ ಶರ್ಮಾ ಅಲ್ಲೇ ಉಳಿದುಕೊಳ್ಳಬೇಕಾಗಿತ್ತು.
ಇದೀಗ ಲಾಕ್ಡೌನ್ ಸಡಿಲಿಸಿ ದೇಶೀಯ ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ವಿಹಾನ್ ದೆಹಲಿಯಿಂದ ರಾಜ್ಯಕ್ಕೆ ಆಗಮಿಸಿದ್ದು, ತನ್ನ ತಾಯಿಯನ್ನು ಸೇರಿಕೊಂಡಿದ್ದಾನೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗನನ್ನು ಬರಮಾಡಿಕೊಂಡ ವಿಹಾನ್ ತಾಯಿ, ‘ನನ್ನ ಮಗ 5 ವರ್ಷದ ವಿಹಾನ್, ದೆಹಲಿಯಿಂದ ಬೆಂಗಳೂರಿಗೆ ಒಂಟಿಯಾಗಿ ಆಗಮಿಸಿದ್ದಾನೆ. ಆತ ಮೂರು ತಿಂಗಳ ನಂತರ ಬೆಂಗಳೂರಿಗೆ ಬಂದಿದ್ದಾನೆ’ ಎಂದು ಹೇಳಿದ್ದಾರೆ.
Karnataka:Passengers leave from Kempegowda International Airport in Bengaluru, as two flights have landed till now at the airport. A mother who came to receive her son says,"My 5-yr-old son Vihaan Sharma has travelled alone from Delhi,he has come back to Bengaluru after 3 months" pic.twitter.com/oAOsLCi7v9