ಹುಬ್ಬಳ್ಳಿ: ದೇಶದಲ್ಲಿ ಮತ್ತೆ ಲಾಕ್ಡೌನ್ ಮಾಡಬೇಕಾದ ಅವಶ್ಯಕತೆ ಇಲ್ಲ. ಆರೋಗ್ಯ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಮರಣ ಪ್ರಮಾಣ ಕೂಡಾ ಕಡಿಮೆ ಇದೆ. ಜನ ಜಾಗರೂಕರಾಗಬೇಕು ಎಂದು ಹೇಳಿದರು.
ನಾಲ್ಕೂವರೆ ತಿಂಗಳಿಂದ ದೆಹಲಿಯಲ್ಲಿದ್ದು ಪ್ರಧಾನಿಯವರ ಮಾರ್ಗದರ್ಶನದಲ್ಲಿ ಕೊರೊನಾ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಚೀನಾಕ್ಕೆ ತಕ್ಕ ಉತ್ತರ ಕೊಡಲು ನಮ್ಮ ರಕ್ಷಣಾ ಪಡೆ ಸನ್ನದ್ಧವಾಗಿದೆ. ಅದಕ್ಕೆ ತಕ್ಕನಾದ ನಾಯಕತ್ವಹೊಂದಿದ್ದೇವೆ. ಡೋಕ್ಲಾಮ್ನಲ್ಲಿಯೂ ಒಂದಿಂಚು ಭೂಮಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಈಗಲೂ ಬಿಟ್ಟುಕೊಟ್ಟಿಲ್ಲ ಎಂದು ಹೇಳಿದರು.