ಬಿಡದಿಯ ಎಸ್.ಪಿ. ಕಲ್ಯಾಣ ಮಂಟಪದಲ್ಲಿ ಸೋಮವಾರ ಜೋಡಿಯೊಂದು ವೈವಾಹಿಕ ಬದುಕಿಗೆ ಕಾಲಿರಿಸಿದ್ದು, ಈ ಸಂದರ್ಭದಲ್ಲಿ ಸುಮಲತಾ ಅಂಬರೀಷ್ ಪರ ಮತ ಚಲಾಯಿಸುವಂತೆ ಕೋರಿ ಗಮನ ಸೆಳೆದಿದೆ. ರೇಷ್ಮಾ ಹಾಗೂ ನಾಗರಾಜು ದಂಪತಿ ಬೈಕ್ ಏರಿ ಫೋಟೊ ಸೆಷನ್ ನಡೆಸಿದ್ದು, ಈ ಸಂದರ್ಭ ಸುಮಲತಾ ಪರ ಘೋಷಣೆ ಕೂಗುವುದನ್ನು ಗೆಳೆಯರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.