‘ಇಲ್ಲಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಸುದ್ಧಿ ತಿಳಿದು ನೆರೆರಾಜ್ಯದವರು ವಲಸೆ ಬರುವುದು ಸಹಜ. ಆದರೆ, ಅದಕ್ಕೆ ಸರ್ಕಾರ ನಿಯಂತ್ರಣ ಹೊಂದದಿರುವುದು ಸರಿಯಲ್ಲ. ವಲಸಿಗರ ಬಗ್ಗೆ ಜಾಗೃತರಾಗದಿದ್ದರೆ ‘ಕನ್ನಡ ಅನಾಥ; ಕನ್ನಡಿಗ ಸ್ಥಳೀಯ ನಿರಾಶ್ರಿತ’ ಅನ್ನುವ ಸ್ಥಿತಿ ಮರುಕಳಿಸುತ್ತದೆ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಅವರು ಸರ್ಕಾರವನ್ನು ಎಚ್ಚರಿಸಿದ್ದಾರೆ.